• October 23, 2024

ಮಂಗಳೂರು: 2000 ಸ್ಥಳಗಳಲ್ಲಿ ” ಹಿಂದೂ ರಾಷ್ಟ್ರದ ಪ್ರತಿಜ್ಞೆ ಮತ್ತು ರಾಜ್ಯದಾದ್ಯಂತ ಹಲಾಲ್ ವಿರೋಧಿ ಹೋರಾಟ ಸಮಿತಿಯ ಸ್ಥಾಪನೆ , ಪತ್ರಿಕಾಗೋಷ್ಠಿ

 ಮಂಗಳೂರು: 2000 ಸ್ಥಳಗಳಲ್ಲಿ ” ಹಿಂದೂ ರಾಷ್ಟ್ರದ ಪ್ರತಿಜ್ಞೆ ಮತ್ತು ರಾಜ್ಯದಾದ್ಯಂತ ಹಲಾಲ್ ವಿರೋಧಿ ಹೋರಾಟ ಸಮಿತಿಯ ಸ್ಥಾಪನೆ , ಪತ್ರಿಕಾಗೋಷ್ಠಿ

 

ಸೆಪ್ಟೆಂಬರ್ 26ರಂದು ಘಟನಾ ಸ್ಥಾಪನೆಯ ದಿನ ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಯಾಗಿ 20 ವರ್ಷಗಳು ಪೂರ್ಣವಾಗಿದೆ ಈ ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ ಸಮಿತಿಯ ವತಿಯಿಂದ ದೇಶದಾದ್ಯಂತ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಈ ಅಭಿಯಾನವು ಆಗಸ್ಟ್ 31 ರಿಂದ ನವೆಂಬರ್ 8ರವರೆಗೆ ನಡೆಯುವುದು ಈ ಅಭಿಯಾನದಲ್ಲಿ ದೇಶದಾದ್ಯಂತ 2,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದೂ ರಾಷ್ಟ್ರದ ಪ್ರತಿಜ್ಞೆ ತೆಗೆದುಕೊಳ್ಳಲಾಗುವುದು ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತರಾದ ರಮೇಶ ಶಿಂದೆ ಅವರು ಹೇಳಿದರು

ಅವರು ಅ.1 ರಂದು ಬಲ್ಮಠ ಇಂಟರ್ ನ್ಯಾಶನಲ್ ಹೋಟೆಲ್ ಮಾಯ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದಲ್ಲಿ ಹಿಂದೂ ರಾಷ್ಟ್ರದ ಅವಶ್ಯಕತೆ ಹಿಂದೂ ಧರ್ಮದ ಮಹಾನತೆ ಶೌರ್ಯ ಜಾಗೃತಿ ಅಗತ್ಯ ಲವ್ ಜಿಹಾದ್ ಹಲಾಲ್ ಜಿಹಾದ್ ಇತ್ಯಾದಿ ವಿಷಯಗಳಲ್ಲಿ ಮೂರು ಸಾವಿರ ಸ್ಥಳಗಳಲ್ಲಿ ಪ್ರವಚನಗಳು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ 18 ದೇವಾಲಯಗಳ ಮತ್ತು 250 ಐತಿಹಾಸಿಕ ಸ್ಥಳಗಳ ಸ್ವಚ್ಛತೆ 350 ಮಹಿಳಾ ಸಂಘಟನೆಗಳ ಉಪಕ್ರಮ ಮತ್ತು 200 ಸ್ಥಳಗಳಲ್ಲಿ ಮಹಿಳೆಯರಿಗೆ ಸ್ವರಕ್ಷಣೆ ತರಬೇತಿ ಉಪಕ್ರಮಗಳನ್ನು ನಡೆಸಲಾಗುವುದು ಅಲ್ಲದೆ 30ಕ್ಕೂ ಹೆಚ್ಚು ಹಿಂದೂ ರಾಷ್ಟ್ರ ಸಂಘಟನೆ ಸಮ್ಮೇಳನ 50 ಕಡೆಗಳಲ್ಲಿ ವರ್ಧಂತ್ಯುತ್ಸವ ಸಮಾರಂಭಗಳು 50 ಕಡೆಗಳಲ್ಲಿ ಹಿಂದೂ ರಾಷ್ಟ್ರ ವಿಚಾರ್ ಸಂಕಿರಣ 70 ಕಡೆ ಬೀದಿ ನಾಟಕಗಳು 200ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಸಭೆಗಳು 60ಕ್ಕೂ ಹೆಚ್ಚು ವಕೀಲರ ಸಭೆ ಇತ್ಯಾದಿ ಉಪಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುವುದು ಈ ಉಪಕ್ರಮಗಳನ್ನು ಹಿಂದೂ ಸಮಾಜದ ಮನಸ್ಸಿನಲ್ಲಿ ಹಿಂದೂ ರಾಷ್ಟ್ರದ ಸಂಕಲ್ಪವನ್ನು ಬಲ ಪಡಿಸುವ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಸಕ್ರಿಯವಾಗಬೇಕು ಈ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದಕ್ಷಿಣ ಕನ್ನಡ ಜಿಲ್ಲಾ ಸಹ ಸಂಚಾಲಕರಾದ ದಿನೇಶ್ ಕುಮಾರ್ ಜೈನ್, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕರಾದ ಗುರುಪ್ರಸಾದ್ ಗೌಡರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!