ಚಾರ್ಮಾಡಿ : ಉಜಿರೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಚಾರ್ಮಾಡಿ ಶಕ್ತಿಕೆಂದ್ರದಲ್ಲಿ ಯುವ ಚೌಪಲ್ ಕಾರ್ಯಕ್ರಮ ಮಾರ್ಚ್ 22 ರಂದು ನಡೆಯಿತು. ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಇವರು ಯುವ ಚೌಪಲ್ ಮಹತ್ವವನ್ನು ಹಾಗೂ ಮೋಧೀಜಿಯವರ ಸಾಧನೆಯನ್ನು ತಿಳಿಸಿದರು. ಯುವಮೋರ್ಚಾ ತಾಲೂಕು ಸದಸ್ಯರಾದ ಸುಧೀರ್ ಚಾರ್ಮಾಡಿ, ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ದಿವಿನೇಶ್ ಚಾರ್ಮಾಡಿ, ಶಕ್ತಿಕೇಂದ್ರ ಅಧ್ಯಕ್ಷರಾದ ಗಣೇಶ್ ಕೋಟ್ಯಾನ್,ಚಾರ್ಮಾಡಿ ಪಂಚಾಯತ್ ಅಧ್ಯಕ್ಷರಾದ ಶಾರದಾ ಅಣಿಯೂರು ಹಾಗೂ ಪಂಚಾಯತ್ ಸದಸ್ಯರು ಯುವ ಮೋರ್ಚಾ […]Read More
Tags :Charmady
ಚಾರ್ಮಾಡಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಚಾರ್ಮಾಡಿ ಘಾಟ್ ನಲ್ಲಿ ಅಲ್ಲಲ್ಲಿ ಗುಡ್ಡ ಕುಸಿತವಾಗಿದೆ.ಸದ್ಯ ಅರ್ಧಕ್ಕೆ ನಿಂತಿರುವ ರಸ್ತರ ದುರಸ್ತಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ಗುಡ್ಡ ಕುಸಿತವಾಗಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.ಹೀಗಾಗಿ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ಘನ ವಾಹನಗಳ ಓಡಾಟ ನಿಷೇಧಕ್ಕೆ ಚಿಂತನೆ ಆರಂಭವಾಗಿದೆ. ಗಾಳಿ ಮಳೆಗೆ ಗುಡ್ಡ ಕುಸಿತವಾದರೆ ರಸ್ತೆ ಸಂಪರ್ಕ ಕಡಿತವಾಗುವ ಭೀತಿಯೂ ಎದುರಾಗಿದೆ.Read More
ಚಾರ್ಮಾಡಿ: ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಭರದಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಮಧ್ಯದಲ್ಲೇ ಕಾರುಗಳನ್ನು ನಿಲ್ಲಿಸಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ. ಆ ರಸ್ತೆಯಿಂದಾಗಿ ಸಾಗುವ ಅದೆಷ್ಟೋ ವಾಹನಗಳಿಗೆ ಅಡಚಣೆಯುಂಟಾಗುತ್ತಿದ್ದು, ವಾಹನಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಲಪಾತಗಳ ಬಳಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.Read More
ಚಾರ್ಮಾಡಿ: ಮನೆಗೆ ಸಾಮಾಗ್ರಿಗಳನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನವೊಂದು ಚಾರ್ಮಾಡಿ ಘಾಟಿಯ ಆಲೇಖಾನ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಪಿಕಪ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.Read More
ಚಾರ್ಮಾಡಿ: ಬಸ್ ನಿರ್ವಾಹಕ ವಿದ್ಯಾರ್ಥಿಗಳನ್ನು ಬಸ್ ಒಳಗೆ ದೂಡಿ ಹಲ್ಲೆ ನಡೆಸಿದ ಎಂಬ ಕಾರಣಕ್ಕೆ ಬಸ್ಸನ್ನು ಚಾರ್ಮಾಡಿ ಬಳಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರು ತಡೆಹಿಡಿದು ಗಲಾಟೆ ನಡೆಸಿದ ಘ ನಡೆದಿದೆ. ಮಂಗಳೂರಿನಿಂದ ಮೂಡಿಗೆರೆಗೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ ಗೆ ಉಜಿರೆಯಲ್ಲಿ ಹತ್ತುವ ವೇಳೆ ನಿರ್ವಾಹಕ ವಿದ್ಯಾರ್ಥಿಗಳನ್ನು ದೂಡಿ ಹಲ್ಲೆ ನಡೆಸಿರುವುದಾಗಿ ಹೇಳಿ ಅವರು ನಿರ್ವಾಹಕನ ಜತೆ ರಂಪಾಟ ನಡೆಸಿದ್ದಾರೆ. ಬಳಿಕ ಬಸ್ ಚಾರ್ಮಾಡಿ ಚೆಕ್ ಪೋಸ್ಟ್ ಗೆ ತಲುಪುವ ಸಮಯ ಅಲ್ಲಿಯ ಸ್ಥಳೀಯರು ಜಮಾಯಿಸಿ […]Read More
ಚಾರ್ಮಾಡಿ: ರಾತ್ರಿ 12 ಗಂಟೆಯಾದರೂ ಮತಯಂತ್ರವನ್ನು ರವಾನಿಸದ ಚುನಾವಣಾಧಿಕಾರಿಗಳು: ಕಾರ್ಯಕರ್ತರಿಂದ ಆಕ್ರೋಶ: ಪೊಲೀಸರಿಂದ
ಚಾರ್ಮಾಡಿ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ರಾತ್ರಿ 12 ಗಂಟೆಯಾದರೂ ಮತಯಂತ್ರ ಕೊಂಡುಹೋಗದೇ ಇದ್ದ ಹಿನ್ನೆಲೆ, ಚಾರ್ಮಾಡಿ ಬೂತ್ ಸಂಖ್ಯೆ 21,22,23,24 ಮತಯಂತ್ರ ಕೆಟ್ಟುಹೋಗಿದ್ದ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಗಲಾಟೆಯನ್ನು ಮಾಡಿದ ಘಟನೆ ಮೇ.10 ರಂದು ನಡೆದಿದೆ. ಕಾರ್ಯಕರ್ತರು ಚುನಾವಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕರೆಂಟ್ ಇಲ್ಲದ ಕಾರಣ ತೆಗೆದುಕೊಂಡು ಹೋಗಲು ಆಗಲಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪರಿಶೀಲನೆ ಬಳಿಕ ರಾತ್ರಿ 12ಗಂಟೆಗೆ ಮತಯಂತ್ರ ರವಾನೆ ಮಾಡಲಾಗಿದ್ದು, ಕಾರ್ಯಕರ್ತರನ್ನು ನಿಯಂತ್ರಣಕ್ಕೆ ತರಲಾಗದೇ ಪೊಲೀಸರು ಲಾಠಿ […]Read More
ಚಾರ್ಮಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಚಾರ್ಮಾಡಿ, ಡಾ ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ , ಪ್ರಗತಿ ಬಂಧು ಸ್ವಸಹಾಯ ಸಂಘ ಮತ್ತು ಜ್ಞಾನವಿಕಾಸ ನವಜೀವನ ಸಮಿತಿ ಸಂಘ ಒಕ್ಕೂಟ ಚಾರ್ಮಾಡಿ, ಜನಜಾಗೃತಿ ಗ್ರಾಮೀಣ ಸಮಿತಿ ಚಾರ್ಮಾಡಿ ವತಿಯಿಂದ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ ಯಲ್ಲಿ ಮೇ.8 ರಂದು ಜರುಗಿತು. ಇನ್ನೂ ಸಂಜೆ ರಂಗಪೂಜೆ ಜರುಗಲಿದೆ. ಈ ಸಂದರ್ಭದಲ್ಲಿ ಅನಂತ್ ರಾವ್ ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ […]Read More
ಚಾರ್ಮಾಡಿ: ಬಿಸಿಲ ಬೇಗೆಯನ್ನು ಸಹಿಸಲಾಗದೇ ಕಾಡುಪ್ರಾಣಿಗಳು ಊರಿನತ್ತ ಮುಖಮಾಡುತ್ತಿವೆ. ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿಘಾಟ್ ನ 7 ನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಅಲ್ಲಿಂದ ಪ್ರಯಾಣಿಸುವ ವಾಹನ ಸವಾರರಿಗೆ ಆನೆ ಕಾಣಿಸಿಕೊಂಡಿದ್ದು , ವಾಹನ ಸವಾರರಲ್ಲಿ ಆತಂಕ ಸೃಷ್ಠಿಯಾಗಿತ್ತು.Read More
ಚಾರ್ಮಾಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ವ್ಯಾಪ್ತಿಯ ಚಾರ್ಮಾಡಿಯಲ್ಲಿ ಬೂತ್ ಜೋಡೋ ಅಭಿಯಾನದ ಅಂಗವಾಗಿ ಕಾರ್ಯಕರ್ತರ ಸಭೆ ಫೆ.18 ರಂದು ನಡೆಯಿತು.Read More