• July 27, 2024

Tags :India

ಆಯ್ಕೆ ಸ್ಥಳೀಯ

ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿ “ಪದ್ಮಶ್ರೀ” ನಾಮನಿರ್ದೇಶನಗೊಂಡಿರುವ ಉಡುಪಿ ಯುವ ಸಾಧಕ

ಉಡುಪಿ ಜಿಲ್ಲೆ ಕಾಡೂರು ಶ್ರೀಮತಿ ಅವರ ಪುತ್ರ ಸಂಜಯ್ ದಯಾನಂದ ಪೂಜಾರಿ. ಉಡುಪಿಯ ಸುನೀತಾ ಮತ್ತು ದಯಾನಂದ ಪೂಜಾರಿ 2025ರ ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಯುವ ಕಲಾವಿದ, ಉದ್ಯಮಿ, ಸಮಾಜ ಸೇವಕ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಅವರು ಸರಳ ಸಜ್ಜನಿಕೆ ಮತ್ತು ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿದ್ದರು. ಎಲ್ಲರ ಮನದಲ್ಲೂ ಮೈಕ್ರೊ ಸಂಜು, ನ್ಯಾನೋ ಗಣೇಶ ಎಂದೇ ಗುರುತಿಸಿಕೊಂಡಿದ್ದಾರೆ . ಮೈಕ್ರೋ ಕಲಾವಿದರಾಗಿ 2010 ರಲ್ಲಿ ತನ್ನ ಮೈಕ್ರೋ ಗಣೇಶನ ವಿಗ್ರಹಕ್ಕಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ […]Read More

ಚುನಾವಣೆ ಜಿಲ್ಲೆ ಸ್ಥಳೀಯ

ಭಾರತದ ಪ್ರಧಾನಿಯಾಗಿ 3 ನೇ ಭಾರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ:

ಬಂದಾರು : ಜೂ 09 ಬಂದಾರು ಗ್ರಾಮದ ಮೈರೋಳ್ತಡ್ಕ 218 ಬೂತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಮೈರೋಳ್ತಡ್ಕ ಬಸ್ ನಿಲ್ದಾಣ ಬಳಿ ಸತತ 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನವನ್ನು ನರೇಂದ್ರ ಮೋದಿ ಸ್ವೀಕರಿಸಿದ್ದು, ಹಾಗೂ ಸಚಿವ ಸಂಪುಟ ಸಚಿವರು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದಾರೆ. ಆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯಘೋಷ ಕೂಗಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.Read More

ಧಾರ್ಮಿಕ

ದೇಶದ ಮಹಾಚುನಾವಣೆ ಹಿನ್ನೆಲೆ: ಕಾಜೂರು ಮಖಾಂ ಶರೀಫ್ ಉರೂಸ್ ದಿನಾಂಕ ಮುಂದಕ್ಕೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸಮನ್ವಯ ಕ್ಷೇತ್ರ ಕಾಜೂರು ಮಖಾಂ ಶರೀಫ್ ಉರೂಸ್ ದಿನಾಂಕವನ್ನು ದೇಶದ ಮಹಾ ಚುನಾವಣೆಯ ಹಿನ್ನೆಲೆಯಲ್ಲಿ ಬದಲಾಯಿಸಲಾಗಿದೆ.ಏಪ್ರಿಲ್ 19 ರಿಂದ 28 ರ ವರೆಗೆ ನಡೆಯಬೇಕಿದ್ದ ಉರೂಸ್ ಕಾರ್ಯಕ್ರಮವನ್ನು ಮೇ 03 ರಿಂದ 12 ರ ತನಕ ನಡೆಸಲು ತಿರ್ಮಾನಿಸಲಾಗಿದೆ. ಲೋಕಸಭಾ ಚುನಾವಣೆ ಎಪ್ರಿಲ್ 26 ರಂದು ನಿಗದಿಯಾಗಿರುವುದನ್ನು ಮನಗಂಡು ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್, ಖಾಝಿ ಸಯ್ಯಿದ್ ಕೂರತ್ ತಂಙಳ್ ನಿರ್ದೇಶನದ ಮೇರೆಗೆ ಉರೂಸ್ ಸಮಿತಿ ತುರ್ತು ಸಭೆ ನಡೆಸಿ […]Read More

ದೇಶ ರಾಜಕೀಯ ರಾಜ್ಯ

ಲೊಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್: ಏಪ್ರಿಲ್ 26 ರಂದು ಮೊದಲನೇ ಹಂತದ ಚುನಾವಣೆ

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು 7 ಹಂತಗಳಲ್ಲಿ ದೇಶದಾದ್ಯಂತ ಲೋಕಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಎಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ದೇಶದಾದ್ಯಂತ ಫಲಿತಾಂಶ ಹೊರಬೀಳಲಿದೆ. ಕರ್ನಾಟಕದ 28 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆRead More

ಪ್ರತಿಭಟನೆ

ಪುತ್ತೂರು: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಕ್ಫ್ ಬೋರ್ಡ್ ಮತ್ತು ವಕ್ಫ್ ಕಾನೂನನ್ನು ಕೂಡಲೇ ರದ್ದುಗೊಳಿಸುವಂತೆ

ಪುತ್ತೂರು : ದೇಶದಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ವಕ್ಫ್​ ಬೋರ್ಡ್ ಮತ್ತು ವಕ್ಫ್ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಪುತ್ತೂರಿನ ಅಮರ್ ಜವಾನ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ .ಕ ಜಿಲ್ಲಾ ಸಹಸಂಚಾಲಕರಾದ ದಿನೇಶ್ ಕುಮಾರ್ ಜೈನ್ ದೇಶದ ಅತೀ ಹೆಚ್ಚು ಭೂಮಿ ಮೊದಲಿಗೆ ರೈಲ್ವೆ ಇಲಾಖೆ, ಎರಡನೇಯದು ಭಾರತೀಯ ಸೇನೆಯಲ್ಲಿ ಮತ್ತು ಮೂರನೇಯದು ವಕ್ಫ್ ಬೋರ್ಡ್ ಹೊಂದಿದೆ. ದೇಶದ […]Read More

ಆಯ್ಕೆ ಸ್ಥಳೀಯ

ರೆಂಕೆದಗುತ್ತು ನಿವಾಸಿ ದೀಪಕ್ ಇವರ ಗ್ಲಾಸ್ ಆರ್ಟ್ ಗೆ “ಇಂಡಿಯಾ ಬುಕ್ ಆಫ್

ಬೆಳ್ತಂಗಡಿ : ಬೆಳ್ತಂಗಡಿ ವ್ಯಾಪ್ತಿಯ ರೆಂಕೆದ ಗುತ್ತು ನಿವಾಸಿ ದೀಪಕ್ ಇವರು ಬಿಡಿಸಿದ  “ಮ್ಯಾಗ್ಸಿಮಮ್ ಪೈಂಟಿಂಗ್ಸ್ ಆನ್ ಗ್ಲಾಸ್ ಶೀಟ್”  (ಗ್ಲಾಸ್ ಆರ್ಟ್ )ಗೆ  “ಇಂಡಿಯಾ ಬುಕ್ ಆಫ್ ರೆಕಾರ್ಡ್” ಲಭಿಸಿದೆ. ಇವರು ರಚಿಸಿದ ಹಲವಾರು ಗ್ಲಾಸ್ ಆರ್ಟ್ ಗೆ ವಿವಿಧ ಕಡೆಗಳಲ್ಲಿ ಹಲವು ಪ್ರಶಸ್ತಿಗಳು ದೊರೆತಿದ್ದು, ಇತ್ತೀಚೆಗೆ ಮೋದಿಯವರ 8ನೇ ವರ್ಷದ ಸಮರ್ಥ ಆಡಳಿತದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ರವರು ಇವರ ಸಾಧನೆಗೆ ಸನ್ಮಾನವನ್ನು ಮಾಡಿದ್ದಾರೆ. ಉದ್ಯೋಗದ ಜೊತೆ […]Read More

ದೇಶ

ಕೇರಳ ಮೂಲಕ ಭಾರತಕ್ಕೆ ಬಂತು ಮಂಕಿಪಾಕ್ಸ್

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಭಾರಿ ಆತಂಕ ಸೃಷ್ಟಿಸಿದ ಮಂಕಿ ಪಾಕ್ಸ್ ಕೇರಳದ ಮೂಲಕ ಭಾರತಕ್ಕೂ ಕಾಲಿಟ್ಟಿದೆ. ವಿದೇಶದಿಂದ ಕೇರಳಕ್ಕೆ ಬಂದ 35 ವರ್ಷದ ವ್ಯಕ್ತಿ ಒಬ್ಬನಲ್ಲಿ ಮಂಕಿ ಪಾಕ್ಸ್ ಗುರುವಾರ ದೃಢಪಟ್ಟಿದೆ. ಈ ಹಿಂದೆ ದೇಶದ ಕೋವಿಡ್ ಮೊದಲ ಪ್ರಕರಣ ಕೂಡ ಕೇರಳದಲ್ಲಿ ಧೃಢಪಟ್ಟಿತ್ತು. ಈಗ ಮತ್ತೆ ದೇಶದ ಮೊದಲ ಮಂಕಿ ಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ ಎಂಬುವುದು ಗಮನಾರ್ಹ. ಸೋಂಕಿತ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಸೋಂಕಿತನ ನಿಕಟ ಸಂಪರ್ಕದಲ್ಲಿರುವವರ ಪತ್ತೆಗೆ ಕ್ರಮ […]Read More

error: Content is protected !!