• September 8, 2024

Tags :Mairolthadka

ಜಿಲ್ಲೆ ರಾಜಕೀಯ

ಮೈರೋಳ್ತಡ್ಕ: ಬಿಜೆಪಿ ಮಹಾಸಂಪರ್ಕ ಅಭಿಯಾನ

ಬಂದಾರು : ಬಂದಾರು ಬಿಜೆಪಿ ಶಕ್ತಿಕೇಂದ್ರ ಮೈರೋಳ್ತಡ್ಕ ಬೂತ್ ಸಂಖ್ಯೆ 218 ರಲ್ಲಿ ಮಹಾಸಂಪರ್ಕ ಅಭಿಯಾನಕುರಾಯ ಶ್ರೀ ಸದಾಶಿವ ದೇವರ ಸನ್ನಿದಿ, ಮೈರೋಳ್ತಡ್ಕ ಶ್ರೀ ಕ್ಷೇತ್ರ ಮಾರಿಗುಡಿಯಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ ಅಭಿಯಾನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡರು.Read More

ಜಿಲ್ಲೆ ಸ್ಥಳೀಯ

ಮೈರೋಳ್ತಡ್ಕ: ವಿವೇಕಾನಂದನಗರದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

ಬಂದಾರು : ಹಲವಾರು ವರ್ಷಗಳಿಂದ ಬಹುಬೇಡಿಕೆಯ ಬಸ್ ನಿಲ್ದಾಣಕ್ಕೆ ಮುಕ್ತಿ ಸಿಕ್ಕಿದೆ.ಚಾಮುಂಡೇಶ್ವರಿ ಯುವಕ ಮಂಡಲ , ಶ್ರೀ ಕ್ಷೇತ್ರ ಮುಂಡೂರು ಇದರ ಪ್ರಾಯೋಜಕತ್ವದಲ್ಲಿ ಬಂದಾರು ಗ್ರಾಮದ ಮೈರೋಳ್ತಡ್ಕದ ವಿವೇಕಾನಂದನಗರದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಬಸ್ ತಂಗುದಾಣ ಮಾರ್ಚ್ 17 ರoದು ಲೋಕಾರ್ಪಣೆಗೊಂಡಿತು. ಪ್ರಗತಿಪರ ಕೃಷಿಕರು ಕೊಡುಗೈ ದಾನಿ ಶ್ರೀಪತಿ ಭಟ್ ಮುಂಡೂರು ಇವರು ದೀಪ ಬೆಳಗಿಸುವವ ಮೂಲಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮುಂಡೂರು ಧರ್ಮಧರ್ಶಿಗಳಾದ ಆನಂದ ಗೌಡ, ಮೈರೋಳ್ತಡ್ಕ ಶಿವಶಕ್ತಿ […]Read More

ಕಾರ್ಯಕ್ರಮ

ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ‌ ಶಾಲೆ ಮೈರೋಳ್ತಡ್ಕ ಶಾಲಾ ಪ್ರಾರಂಭೋತ್ಸವ

ಮೈರೋಳ್ತಡ್ಕ : ಮೇ 31 ಬಂದಾರು ಗ್ರಾಮದ‌ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ 2023-24 ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರು ದೀಪ ಬೆಳಗಿಸಿ ಈ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಬಂದಾರು ಗ್ರಾ.ಪಂ ಸದಸ್ಯರಾದ ಶ್ರೀಮತಿ ‌ಸುಚಿತ್ರಾ ಮುರ್ತಾಜೆ,ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ಹರೀಣಾಕ್ಷಿ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ ಕೆ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ […]Read More

ಸ್ಥಳೀಯ

ಮೈರೋಳ್ತಡ್ಕ: ಶಾಸಕರಾದ ಹರೀಶ್ ಪೂಂಜರಿಗೆ ಅಭಿನಂದನೆ ಸಲ್ಲಿಸಿದ ಬೃಹತ್ ಕಟೌಟ್

ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ಶಿವಾಜಿಸರ್ಕಲ್ ಬಳಿ ಎರಡನೇ ಬಾರಿಗೆ ಶಾಸಕರಾಗಿ ಅಭೂತಪೂರ್ವ ಗೆಲುವಿನ ನಗೆ ಬೀರಿದ ಹರೀಶ್ ಪೂಂಜ ರವರಿಗೆ ಮೈರೋಳ್ತಡ್ಕ ಹರೀಶ್ ಪೂಂಜ ಅಭಿಮಾನಿಗಳು ಬೃಹತ್ ಕಟೌಟ್ ಹಾಕಿ ಅಭಿನಂದನೆ ಸಲ್ಲಿಸಲಾಗಿದೆ.Read More

ನಿಧನ ಸ್ಥಳೀಯ

ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ ನಿಧನ

ಮೈರೋಳ್ತಡ್ಕ:ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ(87 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ ಡಿ.05 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ನೀಲಮ್ಮ 3 ಗಂಡು,4 ಹೆಣ್ಣು ಮಕ್ಕಳು ,ಸಹೋದರ ,ಸಹೋದರಿಯರು, ಮೊಮ್ಮಕ್ಕಳು ,ಬಂಧು -ಬಳಗ,ಕುಟುಂಬ ವರ್ಗದವರನ್ನು ಅಗಲಿದ್ದಾರೆ.Read More

ಕಾರ್ಯಕ್ರಮ ಜಿಲ್ಲೆ ಸ್ಥಳೀಯ

ಮೈರೋಳ್ತಡ್ಕ:ಗ್ರಾಮ ಸುಭಿಕ್ಷಾ ಮತ್ತು ದೇವಾಸ್ಥಾನದ ಅಭಿವೃದ್ಧಿಯ ಸಮಾಲೋಚನಾ ಸಭೆ

ಮೈರೋಳ್ತಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಬಿಸಿ ಟ್ರಸ್ಟ್ ಗುರುವಾಯನಕೆರೆ, ಕಣಿಯೂರು ವಲಯದ ಬಂದಾರು -ಮೈರೋಳ್ತಡ್ಕ ಒಕ್ಕೂಟ ಹಾಗೂ ಶ್ರೀ ಸದಾಶಿವ ದೇವಸ್ಥಾನ ಕುರಾಯ ಬಂದಾರು ಸದಾಶಿವ ಭಜನಾ ಮಂಡಳಿ ಕುರಾಯ ಹಾಗೂ ಜನಜಾಗೃತಿ ಗ್ರಾಮ ಸಮಿತಿ ಬಂದಾರು ಮೈರೋಳ್ತಡ್ಕ ವತಿಯಿಂದ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷಾ ಮತ್ತು ದೇವಸ್ಥಾನದ ಅಭಿವೃದ್ಧಿ ಯ ಸಮಾಲೋಚನ ಸಭೆ ನ.20 ರಂದು ನಡೆಯಿತು. ಗ್ರಾಮ ಸುಭಿಕ್ಷಾ ಕಾರ್ಯಕ್ರಮ ದ ಅಂಗವಾಗಿ ಶ್ರೀ ಸದಾಶಿವ ದೇವರಿಗೆ […]Read More

ಕಾರ್ಯಕ್ರಮ ಸ್ಥಳೀಯ

ಮೈರೋಳ್ತಡ್ಕ: ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಮಾಹಿತಿ ಕಾರ್ಡ್ ಕಾರ್ಯಾಗಾರ ಉದ್ಘಾಟನೆ

ಮೈರೋಳ್ತಡ್ಕ: ಸೆ 28 ಬಂದಾರು ಗ್ರಾಮದ ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿ ಮೈರೋಳ್ತಡ್ಕ, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಗುರುವಾಯನಕೆರೆ & ಸೇವಾ ಸಿಂಧು ಡಿಜಿಟಲ್‌ ಸೇವಾ ಕಾಮನ್ ಸರ್ವೀಸ್ ಸೆಂಟರ್ ಮೈರೋಳ್ತಡ್ಕಇದರ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (AHBHA CARD) ಮಾಹಿತಿ ಕಾರ್ಡ್ ಕಾರ್ಯಾಗಾರ ಉದ್ಘಾಟನಾ‌ ಕಾರ್ಯಕ್ರಮಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕ’ದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಶಾಂತ ಗೌಡ ನಿಂರ್ಬುಡಅಧ್ಯಕ್ಷರು ಬೂತ್ ಸಮಿತಿ ಮೈರೋಳ್ತಡ್ಕ ಇವರು […]Read More

ಕಾರ್ಯಕ್ರಮ ಸ್ಥಳೀಯ

ಮೈರೋಳ್ತಡ್ಕ: ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ

ಮೈರೋಳ್ತಡ್ಕ: ಬಂದಾರು ಗ್ರಾಮದ ಸದಾಶಿವ ಯುವಕ ಮಂಡಲ (ರಿ.) ದಿವ್ಯಶ್ರೀ ಮಹಿಳಾ ಮಂಡಲ (ರಿ.)ಮೈರೋಳ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಕಾರ್ಯಕ್ರಮ ಸೆ.18 ರಂದು ಜರುಗಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರವರು ಆಗಮಿಸಿ ಶುಭಹಾರೈಸಿದರು. ಕಾರ್ಯಕ್ರಮದ‌ ಉದ್ಘಾಟನೆಯನ್ನು ಶ್ರೀ ಕುರಾಯ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ‌ಮಹೇಶ್ ಭಟ್ ಹಾಗೂ ಮಲ್ಲಕಂಭದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಶ್ರೀ ಧರ್ಣಪ್ಪ ಗೌಡ ಬಾನಡ್ಕ ಇವರು […]Read More

ಶುಭಾಶಯ ಸ್ಥಳೀಯ

ಅಂತರಾಷ್ಟ್ರೀಯ ಕರಾಟೆ ಪಂದ್ಯಾಟ -2022 ಸ್ಪರ್ಧೆಯಲ್ಲಿ ತಾಲೂಕಿಗೆ ಕೀರ್ತಿ ತಂದ ಉರುವಾಲು ಶ್ರೀ

ಮೈರೋಳ್ತಡ್ಕ: ಆಗಸ್ಟ್ 20 ರಿಂದ 21ರ ವರೆಗೆ ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾಟ -2022 ಸ್ಪರ್ಧೆಯಲ್ಲಿ ಉರುವಾಲು ಶ್ರೀ ಭಾರತಿ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಯಜ್ಞೇಶ್ 10 ರಿಂದ 12 ನೇ ವರ್ಷದ ವಯೋಮಿತಿಯ ಕಟಾ ವಿಭಾಗದಲ್ಲಿ ದ್ವೀತಿಯ , ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಇತಿಹಾಸದಲ್ಲೆ ಶಾಲೆಗೆ,ತಾಲೂಕಿಗೆ ಕೀರ್ತಿ ,ಗೌರವ ವನ್ನು ತಂದಿದ್ದಾರೆ. ಈತ ಬಂದಾರು ಗ್ರಾಮದ ಮೈರೋಳ್ತಡ್ಕ ಚಾಕೋಟೆದಡಿ ಪ್ರೇಮಲತಾ ಮತ್ತು ಗಣೇಶ್ […]Read More

ಕಾರ್ಯಕ್ರಮ

ಬಂದಾರು:ಆರೋಗ್ಯ ಮತ್ತು ಕ್ಷೇಮಕೇಂದ್ರ ,ಉಪಕೇಂದ್ರಗಳ ಉದ್ಘಾಟನೆ

ಬಂದಾರು: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮೈರೋಳ್ತಡ್ಕ ದಲ್ಲಿಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆ ಆರೋಗ್ಯ ಮತ್ತು ಕ್ಷೇಮಕೇಂದ್ರ ,ಉಪಕೇಂದ್ರವನ್ನು ಬಂದಾರು ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ ಇವರು ಆ.18 ರಂದು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ| ಸುನಿಲ್,ಸಮುದಾಯ ಆರೋಗ್ಯಾಧಿಕಾರಿ ಜಗದೀಶ್ ಹಾಗೂ ವೆಂಕಟೇಶ್ ಸಮುದಾಯ ಅಧಿಕಾರಿ ಹೇಮಲತಾ,ನಿಶ್ಮಿತಾ,ಸೌಮ್ಯ,ಮಧುಶ್ರೀ,ಪ್ರಾಥಮಿಕ ಆರೋಗ್ಯ ಕೇಂದ್ರ ಸುರಕ್ಷಣಾಧಿಕಾರಿ,ಸುನಿತಾ,ಶ್ವೇತ,ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ […]Read More

error: Content is protected !!