• October 18, 2024

ಜೇಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜು ನಡ ಸಹಯೋಗದಿಂದ ನರೇಂದ್ರ ನಮನ ಕಾರ್ಯಕ್ರಮ

 ಜೇಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜು ನಡ ಸಹಯೋಗದಿಂದ ನರೇಂದ್ರ ನಮನ ಕಾರ್ಯಕ್ರಮ

 

ನಡ: ಜೇಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜು ನಡ ಸಹಯೋಗದಿಂದ
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನರೇಂದ್ರ ನಮನ ಕಾರ್ಯಕ್ರಮ ಜ.12ರಂದು‌ನಡ ಸ.ಪ.ಪೂ.ಕಾಲೇಜು ನಡ ಇಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಜೆಸಿ ಶಂಕರ್ ರಾವ್ ವಹಿಸಿದರು.ಈ ಸಂದರ್ಭದಲ್ಲಿ ನಡ.ಸ.ಪ.ಪೂ ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್, ಜೇಸಿಐ ಬೆಳ್ತಂಗಡಿ ಮಂಜುಶ್ರೀ ನಿಕಟಪೂರ್ವ ಅಧ್ಯಕ್ಷ ಪ್ರಸಾದ್, ಪೂರ್ವಧ್ಯಕ್ಷ ಚಿದಾನoದ ಇಡ್ಯಾ ಕಾರ್ಯಕ್ರಮ ಸಂಯೋಜಕಿ ಆಶಾಲತಾ, ಕಾರ್ಯದರ್ಶಿ ಸುಧೀರ್ ಕೆ.ಎನ್ ಉಪಸ್ಥಿತರಿದ್ದರು.

ಯುವ ಪೀಳಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು, ಆದರ್ಶ ಪ್ರಾಯರಾಗಿ ಬದುಕು ಕಟ್ಟಿಕೊಳ್ಳ ಬೇಕು, ವಿವೇಕಯುಕ್ತ ಮಾತುಗಳನ್ನು ಜೀವನದಲ್ಲಿ ಆಡಬೇಕು ಎಂದು ದಿಕ್ಸೂಚಿ ಭಾಷಣದಲ್ಲಿ ಪ್ರಥ್ವಿಶ್ ಧರ್ಮಸ್ಥಳ ವಿದ್ಯಾರ್ಥಿಗಳನ್ನು ಪ್ರೆರೇಪಿಸಿದರು.

ನರೇಂದ್ರ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಆದರ್ಶ ಯುವ ನಾಯಕ ಪ್ರಶಸ್ತಿಯನ್ನು ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡರಿಗೆ ನೀಡಿ ಸನ್ಮಾನಿಸಲಾಯಿತು.

ಇದೆ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಜೇತರ ಪಟ್ಟಿಯನ್ನು ಕ್ವಿಜ್ ಮಾಸ್ಟರ್ ಜೆಸಿ ಹೇಮಾವತಿ ವಾಚಿಸಿದರು.

ಜೆಸಿ ಚಂದ್ರಹಾಸ ಬಳಂಜ ವೇದಿಕೆಗೆ ಅತಿಥಿಗಳನ್ನು ಬರಮಾಡಿಕೊಂಡರು . ಜೆಸಿ ರಜತ್ ಜೆಸಿ ವಾಣಿ ವಾಚಿಸಿದರು, ಸ.ಪ.ಪೂ ಕಾಲೇಜು ರೆಡ್ ಕ್ರಾಸ್ ಘಟಕದ ನಿರ್ದೇಶಕರಾದ ಮೋಹನ್ ಗೌಡ ಧನ್ಯವಾದವಿತ್ತರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು, ಜೆಸಿ ಪೂರ್ವಧ್ಯಕ್ಷರಾದ ಜೆಸಿ ಶ್ರೀನಾಥ್ ಕೆ. ಎಮ್, ಜೆಸಿ ತುಕಾರಾಮ್, ಜೆಸಿ ಸ್ವರೂಪ್ ಶೇಖರ್, ಮಹಿಳಾ ಜೆಸಿ ಪೂರ್ವಧ್ಯಕ್ಷೆ ಜೆಸಿ ಮಮತಾ ಶ್ರೀನಾಥ್, ಸದಸ್ಯರಾದ ಶೈಲೇಶ್ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!