• October 25, 2024

ತೋಟತ್ತಾಡಿ: ಬೆಂದ್ರಾಳ ರಕ್ಷಿತಾರಣ್ಯ ಸುತ್ತಮುತ್ತ ಸ್ಯಾಟಲೈಟ್ ಫೋನ್ ಕರೆ ಪತ್ತೆ ಬಗ್ಗೆ ಮಾಹಿತಿ ಇಲ್ಲ: ಎಸ್ಪಿ ಖಷಿಕೇಶ್ ಸೋನಾವಣೆ ಸ್ಪಷ್ಟ

 ತೋಟತ್ತಾಡಿ: ಬೆಂದ್ರಾಳ ರಕ್ಷಿತಾರಣ್ಯ ಸುತ್ತಮುತ್ತ ಸ್ಯಾಟಲೈಟ್ ಫೋನ್ ಕರೆ ಪತ್ತೆ ಬಗ್ಗೆ ಮಾಹಿತಿ ಇಲ್ಲ: ಎಸ್ಪಿ ಖಷಿಕೇಶ್ ಸೋನಾವಣೆ ಸ್ಪಷ್ಟ

 

ತೋಟತ್ತಾಡಿ: ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ರಕ್ಷಿತಾರಣ್ಯದಲ್ಲಿ ಯಾವುದೇ ಸ್ಯಾಟಲೈಟ್ ಕರೆಗಳು ಪತ್ತೆಯಾದ ಬಗ್ಗೆ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಖುಷಿಕೇಶ್ ಸೋನಾವಣೆ ಸ್ಪಷ್ಟಪಡಿಸಿದ್ದಾರೆ.

ಕಕ್ಕಿಂಜೆ ಭಾಗ ಕಾಡುಪ್ರದೇಶವನ್ನು ಒಳಗೊಂಡಿದ್ದು ಚಾರ್ಮಾಡಿ ಘಾಟ್ ಸುತ್ತ ಮುತ್ತ ಟ್ರಯಲ್ ಬ್ಲಾಸ್ಟ್ ಅನುಮಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ಪಿ, ಧರ್ಮಸ್ಥಳ ಠಾಣಾ ಪೊಲೀಸರು ಸುತ್ತಮುತ್ತ ಪರಿಶೀಲನೆ ನೇಸಿದ್ದು ಸ್ಯಾಟಲೈಟ್ ಫೋನ್ ಹೋಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಹೆಚ್ಚಾಗಿ ಸಿಡಿಮದ್ದುಗಳನ್ನು ಹೊಡೆದಿರಬಹುದು ಹೊರತು ಯಾವುದೇ ಟ್ರಯಲ್ ಬ್ಲಾಸ್ಟ್ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!