ಗಬ್ಬದ ಗೋವನ್ನು ಕಡಿದು ಇನ್ನೂ ಭೂಮಿಗೆ ಬಾರದ ಕರುವಿನ ರುಂಡವನ್ನು ಕಾಡಿಗೆ ಎಸೆದ ದುಷ್ಕರ್ಮಿಗಳು

ಬಾಳೆಹೊನ್ನೂರು: ಅಕ್ರಮ ಕಸಾಯಿ ಕಾಣೆ ನಡೆಸಿದ್ದಲ್ಲದೆ ಕದ್ದು ತಂದ ಗಬ್ಬದ ಗೋವನ್ನ ಕಡಿದು ಇನ್ನೂ ಭೂಮಿಗೆ ಬಾರದ ಅದರ ಕರುವನ್ನ ಕಾಡಿನಲ್ಲಿ ಎಸೆದ ಹಿಂಸಾತ್ಮಕ ಕೃತ್ಯವೊಂದು ಮಲೆನಾಡಿನಲ್ಲಿ ಬೆಳಕಿಗೆ ಬಂದಿದ್ದು ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಹಳೆ ಕಡಬಗೆರೆ ನಿವಾಸಿ ರವೀಂದ್ರ ಎಂಬವರಿಗೆ ಸೇರಿದ ಗಬ್ಬದ ದನ ಇದಾಗಿದ್ದು ಕಳೆದ ರಾತ್ರಿ ಗೋ ಕಳ್ಳರ ಪಾಲಾಗಿತ್ತು ಬಳಿಕ ಹಂತಕರು ಎಲೆಕಲಿ ಎಂಬಲ್ಲಿ ಹಸುವಿನ ತಲೆ ಕಡಿದು ಮಾಂಸ ಮಾಡಿದ್ದಲ್ಲದೆ ಅದರ ಹೊಟ್ಟೆ ಅಡಗಿದ್ದ ಕರುವನ್ನು ಕಾಡಿನಲ್ಲಿ ಎಸಿದಿದ್ದರು.
ಮುಂಜಾನೆ ವೇಳೆ ಗೋಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದ್ದು ಮಾಲೀಕ ಎಲ್ಲೆಡೆ ಹುಡುಕಾಡಿದಾಗ ಹಸುವಿನ ರುಂಡಪತ್ತೆಯಾಗಿತ್ತು. ಇದಾಗಿ ಸ್ವಲ್ಪ ದೂರದಲ್ಲಿ ಹಸುವಿನ ಕರುವಿನ ಮೃತ ದೇಹ ಪತ್ತೆಯಾಗಿದೆ . ಈ ಬಗ್ಗೆ ಹಸುವಿನ ಮಾಲಿಕ ಪೊಲೀಸರಿಗೆ ದೂರು ನೀಡಿದ್ದು ಶೀಘ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿದೆ.