• September 8, 2024

ಬೆಳ್ತಂಗಡಿ: ಚರ್ಚ್ ರೋಡ್ ಬಳಿ ಇರುವ ಸಾರ್ವಜನಿಕ ಬಸ್ ನಿಲ್ದಾಣದ ಮೇಲ್ಚಾವಣಿಯಲ್ಲಿ ಅವ್ಯವಸ್ಥೆ: ಸೊಳ್ಳೆಗಳ ಕಾಟದಿಂದ ಬೇಸತ್ತ ಸಾರ್ವಜನಿಕರು

 ಬೆಳ್ತಂಗಡಿ: ಚರ್ಚ್ ರೋಡ್ ಬಳಿ ಇರುವ ಸಾರ್ವಜನಿಕ ಬಸ್ ನಿಲ್ದಾಣದ ಮೇಲ್ಚಾವಣಿಯಲ್ಲಿ ಅವ್ಯವಸ್ಥೆ: ಸೊಳ್ಳೆಗಳ ಕಾಟದಿಂದ ಬೇಸತ್ತ ಸಾರ್ವಜನಿಕರು

ಬೆಳ್ತಂಗಡಿ: ಜನರ ಹಿತಕ್ಕಾಗಿ, ಉಪಯೋಗಕ್ಕಾಗಿ ಹಲವಾರು ಸೌಕರ್ಯಗಳನ್ನು ನೀಡಲಾಗುತ್ತದೆ ಆದರೆ ಆ ಮೂಲಭೂತ ಸೌಕರ್ಯಗಳನ್ನು ಮನಬಂದಂತೆ ಉಪಯೋಗಿಸಿ ಅವ್ಯವಸ್ಥೆಯನ್ನು ಸೃಷ್ಠಿಸುವುದು ಎಷ್ಟು ಸರಿ? ಕೆಲವೊಂದು ಕಡೆಗಳಲ್ಲಿ ಸರಿಯಾಗಿ ನಿಲ್ಲಲು ಬಸ್ ನಿಲ್ದಾಣಗಳೆ ಇಲ್ಲದೆ ರಸ್ತೆ ಬದಿಯಲ್ಲಿ ಬಸ್ ಗಾಗಿ ಕಾದು ಪರದಾಡುವ ಜನರಿದ್ದಾರೆ ಆದರೆ ಇಲ್ಲೊಂದು ಕಡೆ ಸಾರ್ವಜನಿಕ ಬಸ್ ನಿಲ್ದಾಣದ ಮೇಲ್ಚಾವಣಿಯಲ್ಲಿ ಬೇಕಾ ಬಿಟ್ಟಿಯಾಗಿ ತೆಂಗಿನ ಗೆರಟೆ ರಾಶಿ ರಾಶಿ ಕಸಗಳು ಕೊಳೆತು ನಾರುತ್ತಿರುವುದು ಬೆಳಕಿಗೆ ಬಂದಿದೆ ಅಷ್ಟೆ‌ ಅಲ್ಲದೆ ಇದರಿಂದ ಬಸ್ ಗಾಗಿ ಅಲ್ಲಿ ಕಾಯುವ ಸಾರ್ವಜನಿಕರು ಸೊಳ್ಳೆಯ ಕಾಟದಿಂದ ರಸ್ತೆ ಬದಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಬಹುದು
ಇದು ಕಂಡು ಬಂದಿದ್ದು ಬೆಳ್ತಂಗಡಿ ಯ ಚರ್ಚ್ ರೋಡ್ ಬಳಿ ಇರುವ ಸಾರ್ವಜನಿಕ ಬಸ್ ನಿಲ್ದಾಣದ ಮೇಲ್ಚಾವಣಿಯಲ್ಲಿರುವ ಅವ್ಯವಸ್ಥೆ.

ಮೇಲ್ಚಾವಣಿಯಲ್ಲಿ ರಾಶಿ ರಾಶಿ ಕಸಗಳಿದ್ದು ಮಳೆ ನೀರು ನಿಂತು ಸೊಳ್ಳೆಗಳಿಂದ ತೊಂದರೆಗೀಡಾಗಿದ್ದಾರೆ
ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ

Related post

Leave a Reply

Your email address will not be published. Required fields are marked *

error: Content is protected !!