ಉಪ್ಪಿನಂಗಡಿ: ಹೆರಿಗೆ ವೇಳೆ ತೀವ್ರ ರಕ್ತಸ್ರಾವ: ಗಂಡು ಮಗುವಿಗೆ ಜನ್ಮ ನೀಡಿ ಉಸಿರು ಚೆಲ್ಲಿದ ತಾಯಿ: ಅಮ್ಮನನ್ನು ಅಗಲಿದ ಹಸುಗೂಸು
![ಉಪ್ಪಿನಂಗಡಿ: ಹೆರಿಗೆ ವೇಳೆ ತೀವ್ರ ರಕ್ತಸ್ರಾವ: ಗಂಡು ಮಗುವಿಗೆ ಜನ್ಮ ನೀಡಿ ಉಸಿರು ಚೆಲ್ಲಿದ ತಾಯಿ: ಅಮ್ಮನನ್ನು ಅಗಲಿದ ಹಸುಗೂಸು](https://namanachannel.in/wp-content/uploads/2023/06/IMG-20230621-WA0004-720x560.jpg)
ಉಪ್ಪಿನಂಗಡಿ: ಹೆರಿಗೆ ಸಂದರ್ಭದಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದ ಮಗುವಿಗೆ ಜನ್ಮನೀಡಿದ ಬಳಿಕ ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಮೃತಪಟ್ಟ ದಾರುಣ ಘಟನೆ ಜೂ.21 ರಂದು ಬೆಳಗ್ಗೆ ನಡೆದಿದೆ.
ಮೃತಪಟ್ಟ ದುರ್ದೈವಿ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ ಭವ್ಯ ಎಂದು ತಿಳಿದುಬಂದಿದೆ.
ಮೃತರು ಪತಿ ಬಾಲಕೃಷ್ಣ ಗೌಡ, ಪುತ್ರ ಭವಿಷ್, ಸ್ವಸ್ತಿಕ್ ಮತ್ತು ಹಸುಗೂಸು ಮಗುವನ್ನು ಅಗಲಿದ್ದಾರೆ.