• January 22, 2025

ಅಜಿತ್ ಪೂಜಾರಿ ಕನ್ಯಾಡಿ ನಿರ್ದೇಶನದ ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ ಆಲ್ಬಂ ಸಾಂಗ್ ಬಿಡುಗಡೆ

 ಅಜಿತ್ ಪೂಜಾರಿ ಕನ್ಯಾಡಿ ನಿರ್ದೇಶನದ ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ ಆಲ್ಬಂ ಸಾಂಗ್ ಬಿಡುಗಡೆ

 

ಬೆಳ್ತಂಗಡಿ: ಅಜಿತ್ ಪೂಜಾರಿ ಕನ್ಯಾಡಿ ಕ್ರಿಯೇಷನ್ಸ್ ಅರ್ಪಿಸುವ ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ ಎನ್ನುವ ಆಲ್ಬಂ ಸಾಂಗ್ ಇಂದು ಎಪಿಕೆ ಕ್ರಿಯೇಷನ್ಸ್ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಬೆಳ್ತಂಗಡಿ ತಾಲೂಕಿನ ಹರೀಶ್ ಪೂಂಜ ಇವರು ಆಲ್ಬಂ ಸಾಂಗ್ ಅನ್ನು ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಜಿತ್ ಪೂಜಾರಿ ಕನ್ಯಾಡಿ ಇವರ ಸಾಹಿತ್ಯ, ಗಾಯನ, ನಿರ್ದೇಶನ ,ರಾಗಸಂಯೋಜನೆಯಲ್ಲಿ ಮೂಡಿಬಂದ, ನವೀನ್ ಸುವರ್ಣ ಕನ್ಯಾಡಿ, ಪವನ್ ಪ್ರಭು ಉಜಿರೆ, ಅವಿನಾಶ್ ಶೆಟ್ಟಿ ಕನ್ಯಾಡಿ, ನಿದೀಶ್ ಶೆಟ್ಟಿ ಕನ್ಯಾಡಿ, ಅಶೋಕ್ ಬಂಗೇರ ಓಟ್ಲ, ರಾಘವೇಂದ್ತ ಗೌಡ ಊಕ್ರೊಟ್ಟು ಇವರ ನಿರ್ಮಾಣದಲ್ಲಿ ಸಂದೀಪ್ ಆರ್ ಬಳ್ಳಾಲ್ ಇವರ ಸಂಗೀತ ಪ್ರೊಗ್ರಾಮಿಂಗ್, ಸಹನ್ ಎಮ್ ಎಸ್ ಉಜಿರೆ ಇವರ ಸಂಕಲನದಲ್ಲಿ ಸುಂದರವಾಗಿ ಮೂಡಿಬಂದಿದೆ.

ಇನ್ನೂ ಇದರ ಪೂರ್ತಿ ಹಾಡನ್ನು ಎಪಿಕೆ ಕ್ರಿಯೇಷನ್ಸ್ ಯ್ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದಾಗಿದೆ.

Related post

Leave a Reply

Your email address will not be published. Required fields are marked *

error: Content is protected !!