• October 18, 2024

ಕಣಿಯೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಪ್ರಸಾದ್ ಅಸೌಖ್ಯದಿಂದ ನಿಧನ

 ಕಣಿಯೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಪ್ರಸಾದ್ ಅಸೌಖ್ಯದಿಂದ ನಿಧನ

 

ಕಣಿಯೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಎ ಪಿ ಎಂ ಸಿ ಹಾಲಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಢಿದ್ದ ಉರುವಾಲು ಗಣೇಶ್ ಕೆರ್ಮುಣ್ಣಾಯ ರವರು ಡಿ 7 ರಂದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆಲವು ಸಮಯಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬೆಳ್ತಂಗಡಿ ಆಸ್ಪತ್ರೆಗೆ ಡಯಾಲಿಸೀಸ್ ಗಾಗಿ ಬರುತ್ತಿದ್ದರು ಆದರೆ ಇಂದು ಬೆಳಿಗ್ಗೆ 4 ಗಂಟೆ ವೇಳೆ ಡಯಾಲಿಸೀಸ್ ಗಾಗಿ ಬಂದಿದ್ದ ವೇಳೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಪಲ್ಲವಿ ಮಕ್ಕಳಾದ ಶ್ರೀನಿವಾಸ. ಶ್ರೀ ಲಕ್ಷ್ಮೀ. ಹಾಗೂ ಸಹೋದರರಾದ ಡಾ ಶ್ರೀಶ ಕುಮಾರ್ ಕೆರ್ಮುಣ್ಣಾಯ, ದೇವಿ ಪ್ರಸಾದ್ ಕೆರ್ಮುಣ್ಣಾಯ, ರಾಘವೇಂದ್ರ ಕೆರ್ಮುಣ್ಣಾಯ ಹಾಗೂ ಸಹೋದರಿಯರನ್ನು ಬಂಧುಬಳಗದವರನ್ನು ಅಗಲಿದ್ದಾರೆ.

ವಿಧಾನ ಪರಿಷತ್ ಸದಸ್ಯ ರಾದ ಹರೀಶ್ ಕುಮಾರ್ , ಮಾಜಿ ಶಾಸಕರಾದ ವಸಂತ ಬಂಗೇರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಾಹುಲ್ ಹಮೀದ್ ಕರಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಳಾದ ಶೈಲೇಶ್ ಕುಮಾರ್ , ರಂಜನ್ ಗೌಡ, ಭೂ ಅಭಿವೃದ್ಧಿ ಬ್ಯಾಂಕ್ ಸದಸ್ಯರಾದ ಈಶ್ವರ ಭಟ್ ಮಾಯಿಲ್ತೋಡಿ, ಕಾಂಗ್ರೇಸ್ ಮುಖಂಡರಾದ ರಕ್ಷಿತ್ ಶಿವರಾಂ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಯೂಸುಫ್ ಇಳಂತಿಲ, ಮನೋಹರ್ ಕುಮಾರ್ ಉಪ್ಪಿನಂಗಡಿ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಕೆ ವಿ ಪ್ರಸಾದ್, ಪಂ ಮಾಜಿ ಸದಸ್ಯ ಯು ಟಿ ಫಯಾಝ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!