• September 8, 2024

ಒಕ್ಕಲಿಗರ ಯಾನೆ ಗೌಡರ ಸಂಘದ ಸಮಾಲೋಚನಾ ಸಭೆ ಮತ್ತು ಯೋಗ ಸಾಧಕನಿಗೆ ಸನ್ಮಾನ ಕಾರ್ಯಕ್ರಮ

 ಒಕ್ಕಲಿಗರ ಯಾನೆ ಗೌಡರ ಸಂಘದ ಸಮಾಲೋಚನಾ ಸಭೆ ಮತ್ತು ಯೋಗ ಸಾಧಕನಿಗೆ ಸನ್ಮಾನ ಕಾರ್ಯಕ್ರಮ


ಪದ್ಮುಂಜ: ಒಕ್ಕಲಿಗರ ಯಾನೆ ಗೌಡರ ಸಂಘದ ಕಣಿಯೂರು ಗ್ರಾಮ ಸಮಿತಿಯ ಪದ್ಮುಂಜ ವಲಯದ ಸಮಾಲೋಚನಾ ಸಭೆ ಜು. 24ರಂದು ಪದ್ಮುಂಜ ಸಿ. ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅತಿಥಿಗಳಾಗಿ ಆಗಮಿಸದ್ದ ನಿವೃತ್ತ ಶಿಕ್ಷಕರಾದ ಗುಡ್ಡಪ್ಪ ಬಲ್ಯರವರು ಮಾತನಾಡಿ ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಗೌರವಯುತ ಸಾಧನೆ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಸಂಘಟನೆ ಬಲಗೊಳಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ 2022 ದಾಖಲೆ ಮಾಡಿದ ಮುಗೆರೋಡಿ ಪುರುಷೋತ್ತಮ ಗೌಡ ಹಾಗೂ ಮಂಜುಳಾ ದಂಪತಿಯ ಪುತ್ರ ಅಕ್ಷಯ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಸಂಘ ಪದ್ಮುಂಜ ವಲಯದ ಅಧ್ಯಕ್ಷರಾದ ಮಾಧವ ಗೌಡ ಉರುಂಬುತ್ತಿಮಾರ್ ವಹಿಸಿದ್ದರು.

ಹಿರಿಯರಾದ ತಿಮ್ಮಯ್ಯ ಗೌಡ ಪದ್ಮುಂಜ , ಬಾಬು ಗೌಡ ಪೊಯ್ಯ, ಪದ್ಮನಾಭ ಗೌಡ ಕುದ್ಮಾರ್ ಹಾಗೂ ಯುವ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಗೌಡ ಉರುಂಬುತ್ತಿಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮನೀಷಾ ಮುಚ್ಚೂರು ಮತ್ತು ಬಳಗದವರು ಪ್ರಾರ್ಥನೆ ಮಾಡಿ, ಸಂಘದ ಕಾರ್ಯದರ್ಶಿ ನಾರಾಯಣ ಗೌಡ ಮುಚ್ಚೂರು ಸ್ವಾಗತಿಸಿದರು. ಯುವ ವೇದಿಕೆಯ ಕಾರ್ಯದರ್ಶಿ ಕರುಣಾಕರ ಉರುಂಬುತ್ತಿಮಾರ್ ಕಾರ್ಯಕ್ರಮ ನಿರೂಪಿಸಿ, ಸಂಘದ ಜೊತೆ ಕಾರ್ಯದರ್ಶಿ ಲೋಕೇಶ್ ಅಲೆಕ್ಕಿ ವಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!