• September 8, 2024

ಕೊಕ್ಕಡ: ಕೆಟ್ಟು ಹೋದ ರಸ್ತೆಯಿಂದ ಬೇಸತ್ತ ಸ್ಥಳೀಯರು: ರಸ್ತೆ ಸರಿಪಡಿಸುವಂತೆ ಮನವಿ ನೀಡಿದರೂ ಸ್ಪಂದಿಸದ ಪಂಚಾಯತ್: ಸ್ಥಳೀಯ ನಿವಾಸಿಗಳಿಂದಲೇ ರಸ್ತೆ ದುರಸ್ತಿ

 ಕೊಕ್ಕಡ: ಕೆಟ್ಟು ಹೋದ ರಸ್ತೆಯಿಂದ ಬೇಸತ್ತ ಸ್ಥಳೀಯರು: ರಸ್ತೆ ಸರಿಪಡಿಸುವಂತೆ  ಮನವಿ ನೀಡಿದರೂ ಸ್ಪಂದಿಸದ ಪಂಚಾಯತ್: ಸ್ಥಳೀಯ ನಿವಾಸಿಗಳಿಂದಲೇ ರಸ್ತೆ ದುರಸ್ತಿ

ಕೊಕ್ಕಡ: ಕೊಕ್ಕಡ ಗ್ರಾ.ಪಂ ವ್ಯಾಪ್ತಿಯ ಮಲ್ಲಿಗೆ ಮಜಲಿನಿಂದ ಸೌತಡ್ಕಕ್ಕೆ ಸಂಪರ್ಕಿಸುವ ಪಂಚಾಯತ್ ರಸ್ತೆಯನ್ನು ಸರಿಪಡಿಸುವಂತೆ ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗದೇ ಇದ್ದಾಗ ಸ್ಥಳೀಯ ನಿವಾಸಿಗಳೇ ಖರ್ಚು ಮಾಡಿ ಸರಿಪಡಿಸಿದ್ದಾರೆ.

ಮಳೆಯ ಸಂದರ್ಭ ಅಲ್ಲಿಯ ಸ್ಥಳೀಯರು ನಡೆದಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು ಇದರಿಂದ ಬೇಸತ್ತ ಸ್ಥಳೀಯರು ಪಂಚಾಯತ್ ವಾರ್ಡ್ ಸದಸ್ಯರ ಗಮನಕ್ಕೆ ತಂದಿದ್ದರು ಆದರೆ ಏನೂ ಪ್ರಯೋಜನವಾಗದೇ ಇದ್ದಾಗ ಅಲ್ಲಿಯ ಸ್ಥಳೀಯರೇ ಹಿಟಾಚಿ ಮೂಲಕ ಹೊಂಡ ಗಳನ್ನು ಮುಚ್ಚಿ ಸಂಚಾರ ಯೋಗ್ಯವಾದ ರಸ್ತೆಯನ್ನು ಮಾಡಿದರು.

Related post

Leave a Reply

Your email address will not be published. Required fields are marked *

error: Content is protected !!