• September 8, 2024

ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕರ್ಮದ ರೂಪುರೇಷೆಯ ಬಗ್ಗೆ ಪೂರ್ವಭಾವಿ ಸಭೆ

 ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕರ್ಮದ ರೂಪುರೇಷೆಯ ಬಗ್ಗೆ ಪೂರ್ವಭಾವಿ ಸಭೆ

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ಇದರ ಆಶ್ರಯದಲ್ಲಿ ಶಾಸಕರಾದ ಹರೀಶ್ ಪೂಂಜಾ ರವರ ಕಲ್ಪನೆ ಯಂತೆ ಯುವಮೋರ್ಚಾ ದ ವತಿಯಿಂದ ದೀಪಾವಳಿ ಪ್ರಯುಕ್ತ ನಡೆಯುವ ದೋಸೆ ಹಬ್ಬದ ಕಾರ್ಯಕರ್ಮದ ರೂಪುರೇಷೆಯ ಬಗ್ಗೆ ಪೂರ್ವಭಾವಿ ಸಭೆ ಅ.14 ರಂದು ನಡೆಸಲಾಯಿತು.

ಸಭೆಯಲ್ಲಿ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬದಂದು ಹಮ್ಮಿಕೊಂಡಿರುವ ದೋಸೆ ಹಬ್ಬ ಹಾಗೂ ಪೇಟೆಗಳಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ,ವಿಶೇಷ ಸಾಂಸ್ಕೃತಿಕ,ಭಜನೆ,ಸಭಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಈ ವೇಳೆ ಶಾಸಕರು ಮಾತನಾಡಿ ಕಾರ್ಯಕ್ರಮದ ಪ್ರತಿ ವರ್ಷದಂತೆ ಈ ಬಾರಿಯೂ ಹಿಂದಿನ ಬಾರಿಗಿಂತಲು ವಿಜೃಂ ಭಣೆಯಿಂದ ದೋಸೆ ಹಬ್ಬವನ್ನು ನಡೆಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ರಾದ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀನಿವಾಸ್ ರಾವ್, ಗಣೇಶ್ ನಾವರ ,ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿ ಗಳಾದ ವಿನೀತ್ ಸಾವ್ಯ, ಉಮೇಶ್ ಗುರುವಾಯನಕೆರೆ, ಯುವಮೋರ್ಚಾ ಪ್ರಭಾರಿ ಸೀತಾರಾಮ್ ಬೆಳಾಲು ಉಪಸ್ಥಿತರಿದ್ದರು.ಸಭೆಯಲ್ಲಿ ಮಹಾಶಕ್ತಿ ಕೇಂದ್ರದ ಪ್ರಮುಖರು, ಮಂಡಲದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಯುವಮೋರ್ಚಾ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!