• September 8, 2024

ಅರಸಿನಮಕ್ಕಿ: ಕಪಿಲ ಕೇಸರಿ ಯುವಕ ಮಂಡಲದ ಸ್ವಯಂ ಸೇವಕರಿಂದ ರಕ್ತದಾನ

 ಅರಸಿನಮಕ್ಕಿ: ಕಪಿಲ ಕೇಸರಿ ಯುವಕ ಮಂಡಲದ ಸ್ವಯಂ ಸೇವಕರಿಂದ ರಕ್ತದಾನ

ಅರಸಿನಮಕ್ಕಿ: ಸೆ.11 ರಂದು ನಡೆದ ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವಾರ್ಷಿಕ ಸಭೆ ಯ ಅಂಗವಾಗಿ ಅರಸಿನಮಕ್ಕಿ ಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಸಹಕಾರ ನೀಡಬೇಕೆಂಬ ಕೋರಿಕೆಯ ಮೇರೆಗೆ ಕಪಿಲ ಕೇಸರಿಯ ಸ್ವಯಂ ಸೇವಕರಾದ ಕ್ರತಿಕ್ ಭಟ್, ಜಿತೇಂದ್ರ ಗೋಖಲೆ ಶ್ರೀವತ್ಸ ಗೋಖಲೆ ಸುದರ್ಶನ್ ಆಚಾರ್ಯ,ಹರಿಪ್ರಸಾದ್ ,ರೋಹಿತ್ ಗೋಗಟೆ, ಮತ್ತು ಅಧ್ಯಕ್ಷರಾದ ರಾಜೇಶ್ ಬೋಳ್ಳೋಡಿ ಇವರುಗಳು ರಕ್ತದಾನ ಮಾಡಿದರು.

ಉಳಿದ ಸ್ವಯಂ ಸೇವಕರಾದ ಸುಮಂತ್ ಗೌಡ ಅಳಕ್ಕೆ ಪ್ರಸನ್ನ ನಾಯಕ್, ಅನ್ವಿತ್ ರೈ ಸಂಪೂರ್ಣ ಸಹಕಾರ ನೀಡಿದರು.

ಕಪಿಲ ಕೇಸರಿ ಯುವಕ ಮಂಡಲ ಹಾಗೂ ಸ್ವಯಂ ಸೇವಕರನ್ನು, ಹ. ಕೃ. ಸ. ಸಂಘ ದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರವರು ಗೌರವ ಫಲಕ ನೀಡಿ ಅಭಿನಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!