• September 8, 2024

Tags :Mundaje

ಕ್ರೀಡೆ ಶಾಲಾ ಚಟುವಟಿಕೆ ಸ್ಥಳೀಯ

ಬೆಳ್ತಂಗಡಿ : ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟ: ಮುಂಡಾಜೆ

ಮುಂಡಾಜೆ :ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಪದ್ಮುಂಜ ಇದರ ಆಶ್ರಯದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಪ್ರೌಢಶಾಲಾ ಬಾಲಕಿಯರ ತಂಡ ಭಾಗವಹಿಸಿ ಸತತ 14 ವರುಷಗಳಿಂದ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ ಆಗಿರುತ್ತದೆ. ಈ ಪಂದ್ಯಾಟದಲ್ಲಿ ಉತ್ತಮ ಹೊಡೆತಗಾರ್ತಿಯಾಗಿಕು.ಯಕ್ಷಿತ, ಉತ್ತಮ ಸೆಟ್ಟರ್ ಆಗಿ ಕು.ಸಿಂಚನ ಇವರು ವೈಯಕ್ತಿಕ […]Read More

ನಿಧನ

ಮುಂಡಾಜೆ: ತಂದೆಯ ವಿಯೋಗದ ಐದನೇ ದಿನವೇ ಮಗನೂ ಮರಣ

ಬೆಳ್ತಂಗಡಿ; ವಯೋವೃದ್ದರಾದ ತಂದೆ ನಿಧನರಾದ‌ಐದನೇ ದಿನಕ್ಕೇ ಮಗನೂ ನಿಧನರಾದ ಘಟನೆ ಮುಂಡಾಜೆ ಗ್ರಾಮದಲ್ಲಿ ನಡೆದಿದೆ. ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಪುತ್ತಾಕ ಅವರು ಮೃತರಾದ ಐದನೇ ದಿನ ಆ.16 ರಂದು ಅವರ ಮಗ ಅಬೂಬಕ್ಕರ್ ಕೂಳೂರು (50) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯಕ್ಕೊಳಗಾಗಿಕಳೆದ ನಾಲ್ಕೂವರೆ ತಿಂಗಳಿನಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ ಇದ್ದ ಅಬೂಬಕ್ಕರ್ ಅವರು ಗುರುವಾರ ರಾತ್ರಿವೇಳೆ ಅಸುನೀಗಿದರು.ಅಬೂಬಕ್ಕರ್ ಅವರ ತಂದೆ ಹಿರಿಯ ಮೇಸ್ರ್ರಿಗಳಾಗಿದ್ದ ಪುತ್ತಾಕ ಕೂಳೂರು ಅವರು ಕಳೆದ ಸೋಮವಾರವಷ್ಟೇ […]Read More

ಸಮಸ್ಯೆ ಸ್ಥಳೀಯ

ಹೆದ್ದಾರಿ ಕಾಮಗಾರಿ ಅವಾಂತರ;ಮುಂಡಾಜೆಯ ಚಂದ್ರಶೇಖರ ಅಂಬಡ್ತ್ಯಾರು ಅವರ ಮನೆ ಅಪಾಯದಲ್ಲಿ

ಬೆಳ್ತಂಗಡಿ; ಪುಂಜಾಲಕಟ್ಟೆ- ಚಾರ್ಮಾಡಿ ವರೆಗಿನ ಹೈವೇ ಕಾಮಗಾರಿಯಲ್ಲಿ ಗುತ್ತಿಗೆದಾರರ ಅಸಮರ್ಪಕ ಹಾಗೂ ಬೇಜವಾಬ್ಧಾರಿ ನಿರ್ವಹಣೆಯಿಂದಾಗಿ ಈಗಾಗಲೇ ಹಲವು ಅಪಘಾತ ಮತ್ತು ಪ್ರಾಣಹಾನಿ ಸಂಭವಿಸಿರುವ ಮಧ್ಯೆಯೇ ಇದೀಗ ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಎಂಬಲ್ಲಿ ಚಂದ್ರಶೇಖರ ಅವರ ಮನೆಗೆ ಮಳೆ ನೀರು ಪ್ರವಾಹದ ರೀತಿಯಲ್ಲಿ ನುಗ್ಗಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.ಸೋಮವಾರ ರಾತ್ರಿ ಮತ್ತು ಮಂಗಳವಾರ ಭಾರೀ ಪ್ರಮಾಣದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಚರಂಡಿ ಹಾಗೂ ಕೆಲವೆಡೆ ಅರ್ಧ ಮಾಡಿಟ್ಟ ಚರಂಡಿ ಕಾಮಗಾರಿಯ ಪರಿಣಾಮ ತಗ್ಗು ಪ್ರದೇಶದಲ್ಲಿರುವ ಚಂದ್ರಶೇಖರ ಅವರ ಮನೆಗೆ […]Read More

ಸಮಸ್ಯೆ ಸ್ಥಳೀಯ

ಮುಂಡಾಜೆ ಅಗರಿಯಲ್ಲಿ ಪ್ರಾಣಕ್ಕೆ ಕಂಟಕ ವಾಗಿರುವ ವಿದ್ಯುತ್ ತಂತಿ: ಪ್ರಾಣ ಹಾನಿಯಾಗುವ ಮೊದಲು

ಮುಂಡಾಜೆ ಗ್ರಾಮದ ಅಗರಿ ಎಂಬ ಪರಿಸರದಲ್ಲಿ ಸುಮಾರು 50 ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಬಹಳಷ್ಟು ಕ್ಷೀಣಿಸಿದ್ದು , ವರ್ಷದಲ್ಲಿ ಏಳೆಂಟು ಬಾರಿ ಈ ವಿದ್ಯುತ್ ತಂತಿ ಮಾರ್ಗಕ್ಕೆ ಕಡಿದು ಬೀಳುತ್ತಿದೆ. ಈ ಭಾಗದ ಲೈನ್ ಮ್ಯಾನ್ ದೂರು ನೀಡಿದ ತಕ್ಷಣ ಬಂದು ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆದರೆ ಅದೆಷ್ಟು ಬಾರಿ ಇಲಾಖೆಗೆ ಮನವಿ ಮಾಡಿದರೂ ಕೂಡಾ ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸುತ್ತಿಲ್ಲ. ಈ ಹಿಂದೆ ಮೆಸ್ಕಾಂ ಇಲಾಖೆಯ ಅದಾಲತ್ ನಲ್ಲಿ ಕೂಡ ದೂರು […]Read More

ಕಾರ್ಯಕ್ರಮ

ಮುಂಡಾಜೆ ಯಂಗ್ ಚಾಲೆಂಜರ್ಸ್ ನಿಂದ ಪ್ರತಿಭಾ ಪುರಸ್ಕಾರ; ಶೈಕ್ಷಣಿಕ ನಿಧಿ ವಿತರಣೆ

ಬೆಳ್ತಂಗಡಿ; ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಹಾಗೂ ಊರ ದಾನಿಗಳ ಸಹಕಾರದಲ್ಲಿ ಮುಂಡಾಜೆಯ ವೈಸಿ ಭವನದಲ್ಲಿ ಗ್ರಾಮದ ಎಸ್ಸೆಸ್ಸೆಲ್ಸಿ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಆಯ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ಜೂ. 2 ರಂದು ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಪೂರ್ವಾಧ್ಯಕ್ಷ ಸುಜಿತ್ ಎಂ.ಭಿಡೆ “ನಮ್ಮನ್ನು ಗುರುತಿಸಿದವರನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಅವರಿಗೆ ನೆರವಾಗುವ ಸಂಕಲ್ಪ ಮಾಡಬೇಕು. ಸಮಾಜವನ್ನು ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿ ಸಮೂಹ […]Read More

ಅಪಘಾತ

ಮುಂಡಾಜೆ: ರಾ.ಹೆದ್ದಾರಿಗೆ ಉರುಳಿಬಿದ್ದ ಭಾರೀ ಗಾತ್ರದ ಮರ: ಶೌರ್ಯ ತಂಡದಿಂದ ತೆರವು

ಮುಂಡಾಜೆ: ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿರುವ ಘಟನೆ ಇಂದು ನಡೆದಿದೆ. ಸ್ಥಳೀಯರು ತಕ್ಷಣ ಶೌರ್ಯ ಸ್ವಯಂ ಸೇವಕರಿಗೆ ಮಾಹಿತಿ ತಿಳಿಸಿದ್ದು, ಜಗದೀಶ ನಾಯ್ಕ ಹಾಗೂ ಸಚಿನ್ ಬಿಢೆ ಕೂಡಲೇ ಕಾರ್ಯಪ್ರವೃತರಾಗಿ ಮರವನ್ನು ತೆರವುಗೊಳಿಸಲಾಗಿದೆ.Read More

ಕಾರ್ಯಕ್ರಮ

ಮುಂಡಾಜೆ ಗಾಂಧಿ ಕಟ್ಟೆಯಲ್ಲಿ ‘ಗಾಂಧಿನಮನ’ ಕಾರ್ಯಕ್ರಮ

ಮುಂಡಾಜೆ: ಮಹಾತ್ಮಾ ಗಾಂಧೀಜಿಯವರು ಸಾರಿದ ಅಹಿಂಸಾ ತತ್ವ, ಸತ್ಯ, ತನ್ನನ್ನೇ ತಾನು ಒಡ್ಡಿಕೊಂಡು ನಡೆಸಿದ ಉಪವಾಸ ಸತ್ಯಾಗ್ರಹದಂತಹಾ ಚಳವಳಿಯ ನಡೆ, ಧರ್ಮ ಧರ್ಮಗಳ ಮಧ್ಯೆ ಸಹಿಷ್ಣುತೆಯ ಸಂದೇಶ ಅಂತಹಾ ನೆಲೆಗಟ್ಟಿನ ಭಾರತ ಮತ್ತೆ ಉದಯಿಸಬೇಕು. ಆಗ ಮಾತ್ರ ಅವರ ಜೀವನ‌ಸಂದೇಶ ಮರುಸ್ಥಾಪನೆಯಾಗುತ್ತದೆ ಎಂದು ನವೋದಯ ವಸತಿ ಶಾಲೆ ಮುಂಡಾಜೆಯ ಪ್ರಾಂಶುಪಾಲ ಮುರಳೀಧರ ಅಭಿಪ್ರಾಯಪಟ್ಟರು. ಗಾಂಧಿ‌ವಿಚಾರ ವೇದಿಕೆ ಬೆಳ್ತಂಗಡಿ, ಸೌಹಾರ್ದ ವೇದಿಕೆ ಬೆಳ್ತಂಗಡಿಯ ಮುಂಡಾಜೆ ಘಟಕ ಹಾಗೂ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಜಂಟಿ‌ ಸಹಭಾಗಿತ್ವದಲ್ಲಿ ಜ.30 ರಂದು, […]Read More

ಕಾರ್ಯಕ್ರಮ

ಜೂನ್ ನಲ್ಲಿ ಮರೈ ನ್ ಡಿಪ್ಲೋಮಾ ಕೋರ್ಸ್ ಆರಂಭ: ಮುಂಡಾಜೆ ಶಾಲೆ ಶತಮಾನೋತ್ಸವ

ಬೆಳ್ತಂಗಡಿ; “ಮುಂದಿನ ಜೂನ್ ನಲ್ಲಿ ಬೆಳ್ತಂಗಡಿಯಲ್ಲಿ ಮರೈನ್ ಡಿಪ್ಲೋಮಾ ಕೋರ್ಸ್ ಆರಂಭವಾಗಲಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಅನುಮೋದನೆ ದೊರೆತಿದ್ದು 5 ಕೋಟಿ ರೂ. ಅನುದಾನ ಕೂಡ ಮೀಸಲಿರಿಸಲಾಗಿದೆ” ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಮುಂಡಾಜೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. “ಉತ್ತಮ ಚಿಂತನೆಗಳೊಂದಿಗೆ ಮಹತ್ವಾಕಾಂಕ್ಷೆ, ಇಚ್ಛಾ ಶಕ್ತಿ ಇರುವ ಹಿರಿಯರ ಸಹಕಾರ ಅಭಿವೃದ್ಧಿಗೆ ಪೂರಕ. ಮುಂಡಾಜೆಯ ಹಿರಿಯರು ಇಲ್ಲಿನ ಕಿರಿಯರಿಗೆ ಸ್ಫೂರ್ತಿಯಾಗಿದ್ದಾರೆ. ಇಲ್ಲಿನ […]Read More

ಕಾರ್ಯಕ್ರಮ

ವರ್ಗಾವಣೆಗೊಂಡಿರುವ ಮುಂಡಾಜೆ ಪಂಚಾಯತ್ ಪಿಡಿಒ ಸುಮಾ ಎ.ಎಸ್ ಅವರಿಗೆ ಬೀಳ್ಕೊಡುಗೆ

ಮುಂಡಾಜೆ : ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿ ಇದೀಗ ನೆರಿಯ ಗ್ರಾ.ಪಂ ಗೆ ವರ್ಗಾವಣೆಗೊಂಡಿರುವ ಕುಮಾರಿ ಸುಮಾ ಎ.ಎಸ್ ಅವರಿಗೆ ಗ್ರಾ.ಪಂ ಮತ್ತು ಸಂಘ ಸಂಸ್ಥೆಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಡಿ.24 ರಂದು ನಡೆಯಿತು. ಮುಂಡಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ನೂತನ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ರಂಜಿನಿ ಆರ್, ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಬಾಬು ಪೂಜಾರಿ ಕೂಳೂರು, ಗ್ರಾ.ಪಂ ಸದಸ್ಯ ಅಗರಿ ರಾಮಣ್ಣ […]Read More

ಕಾರ್ಯಕ್ರಮ ಜಿಲ್ಲೆ ಶಾಲಾ ಚಟುವಟಿಕೆ ಸ್ಥಳೀಯ

ಮುಂಡಾಜೆ ಶತಮಾನೋತ್ಸವ ಧ್ವಜಾರೋಹಣ: ಧ್ವಜ ಕಟ್ಟೆ ಉದ್ಘಾಟನೆ

ಮುಂಡಾಜೆ: ಶಾಲೆ ಊರ ದೇವಾಲಯಕ್ಕಿಂತ ದೊಡ್ಡದು.ಸಣ್ಣ ಪ್ರಾಯದಿಂದ ಶಿಸ್ತು ನಮ್ರತೆ ದೇಶಭಕ್ತಿ ಕಲಿಸಿಕೊಡುವ ಕೇಂದ್ರ.ಸರಕಾರಿ ಶಾಲೆಯಲ್ಲಿ ಪುಸ್ತಕದ ಶಿಕ್ಷಣ ಮಾತ್ರವಲ್ಲ. ಇಲ್ಲಿ ಅನೇಕ ಅವಕಾಶಗಳಿದ್ದು, ಸರ್ವತೋಮುಖ ಶಿಕ್ಷಣ ದೊರೆಯುತ್ತದೆ ಎಂದು ನಿವೃತ್ತ ಮೇಜರ್ ಜನರಲ್, ರೋಟರಿ ದ್ವಿತೀಯ ರಾಜ್ಯಪಾಲ ಎಂ.ವಿ ಭಟ್ ಅವರು ಹೇಳಿದರು. ಅವರು ಮುಂಡಾಜೆ ಸರಕಾರಿ ಉನ್ನತೀಕರಿಸಿದ ಶಾಲೆಯ ಶತಮಾನೋತ್ಸವದ ಧ್ವಜಾರೋಹಣ ಹಾಗೂ ನೂತನ ಧ್ವಜ ಕಟ್ಟೆ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ದೃಢತೆ ಮತ್ತು ಶ್ರದ್ಧೆ ಬಹಳ ಮುಖ್ಯ. ದೇಶ ಪ್ರೇಮವನ್ನು ಆಂತರಾತ್ಮದಿ […]Read More

error: Content is protected !!