• October 18, 2024

ಪೇರೋಡಿತ್ತಾಯ ಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಗೆ ಹಳೇ ವಿದ್ಯಾರ್ಥಿ ಸಂಘ ದಿಂದ ಉಚಿತ ಪುಸ್ತಕ ವಿತರಣೆ

 ಪೇರೋಡಿತ್ತಾಯ ಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಗೆ ಹಳೇ ವಿದ್ಯಾರ್ಥಿ ಸಂಘ ದಿಂದ ಉಚಿತ ಪುಸ್ತಕ ವಿತರಣೆ

 


ತೆಂಕಕಾ ರಂ ದೂರು ಸರಕಾರಿ ಪ್ರಾಥಮಿಕ ಶಾಲೆಯ ಸುಮಾರು 80 ವಿದ್ಯಾರ್ಥಿಗಳಿಗೆ ಉಚಿತ ವಾಗಿ ಬರೆಯುವ ಪುಸ್ತಕ, ಪೆನ್ನು ಗಳನ್ನು ಶಾಲೆಯ ಹಳೇ ವಿದ್ಯಾರ್ಥಿ ಸಂಘ ದ ವತಿಯಿಂದ ನೀಡಲಾಯಿತು, ಇದರ ನೇತೃತ್ವ ವನ್ನು ಶಾಲಾ ಹಳೇ ವಿದ್ಯಾರ್ಥಿ ಯಾಗಿರುವ, ಮುಸ್ತಫಾ ರವರ ಮುಂದಾಳತ್ವ ದಲ್ಲಿ ಹಾಗು ಎಲ್ಲಾ ಹಳೇ ವಿದ್ಯಾರ್ಥಿಗಳ ಸಹಕಾರ ದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಗ್ರಾಮ ದವರೇ ಆದ ” ಮನುಶ್ರೀ ” ಪ್ರಶಸ್ತಿ ಪುರಸ್ಕೃತ ಪ. ರಾಮಕೃಷ್ಣ ಶಾಸ್ತ್ರಿ ಗಳನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಹಳೆ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ರಾದ ಸತೀಶ್ ಶೆಟ್ಟಿ ಅಳಿಮಾರು, ವಹಿಸಿದ್ದರು, ಕಾರ್ಯಕ್ರಮ ವನ್ನು ಜನಜಾಗೃತಿ ವೇದಿಕೆ ಯ ಸ್ಥಾಪಕ ಅಧ್ಯಕ್ಷ ರಾದ ಕೆ. ವಸಂತ ಸಾಲಿಯಾನ್ ಕಾಪಿನಡ್ಕ, ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು,

ಮುಖ್ಯ ಅತಿಥಿ ಗಳಾಗಿ ವೇದಿಕೆ ಯಲ್ಲಿ ಮಾಜಿ ಸೈನಿಕ ರಾದ ರಾಮನಾಥ ರೈ ಗರಿಯಾರು, ಶಾಲಾ ಎಸ್. ಎಂ. ಡಿ. ಸಿ.ಅಧ್ಯಕ್ಷ ರಾದ ರಘು ನಾಥ ಕಜ್ಜೇಲು, ಪಂಚಾಯತ್ ಸದಸ್ಯರು ಗಳು ಉಪಸ್ಥಿತರಿದ್ದರು,ಕಾರ್ಯಕ್ರಮ ವನ್ನು ಶಿಕ್ಷಕಿ ಜ್ಯೋತಿ ನಿರೂಪಿಸಿ, ಮುಖ್ಯೋಪಾಧ್ಯಾಯಿನಿ ಬೆನಡ್ಮಿಕ ಪಾಯ್ಸ್ ಸ್ವಾಗತಿಸಿ ಹಳೆ ವಿದ್ಯಾರ್ಥಿ ಸಂಘ ದ ಉಪಾಧ್ಯಕ್ಷ ನವಾಜ್ ಗಿಂಡಾಡಿ ಧನ್ಯವಾದ ವಿತ್ತರು.

ಕಾರ್ಯಕ್ರಮ ದಲ್ಲಿ ಮಕ್ಕಳ ಪೋಷಕರು, ಶಾಲಾ ಹಳೇ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಶಾಲಾ ಶಿಕ್ಷಕಿಯವರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!