• September 8, 2024

ಜು.17 ರಂದು ಮದುವೆ ನಿಗದಿಯಾಗಿದ್ದ ಯುವಕ ಬಕ್ರೀದ್ ದಿನದಂದೇ ಅಪಘಾತದಲ್ಲಿ ನಿಧನ

 ಜು.17 ರಂದು ಮದುವೆ ನಿಗದಿಯಾಗಿದ್ದ ಯುವಕ ಬಕ್ರೀದ್ ದಿನದಂದೇ ಅಪಘಾತದಲ್ಲಿ ನಿಧನ

ಕಾಸರಗೋಡು: ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಮುಗ್ರಾಲ್ ಪುತ್ತೂರು ಬನ್ನಿಕುನೆಂಬಲ್ಲಿ ಆಟೋರಿಕ್ಷ ಮತ್ತು ಸ್ಕೂಟರ್ ನಡುವೆ ಜುಲೈ 10ರಂದು ಅಪಘಾತ ನಡೆದಿದೆ ಅಪಘಾತದಲ್ಲಿ ಜುಲೈ 17ರಂದು ಮದುವೆ ನಿಗದಿಯಾಗಿದ್ದ ಯುವಕನೊಬ್ಬ ಬಕ್ರಿದ್ ಹಬ್ಬದಂದೆ ಬಲಿಯಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಮುಟ್ಟ ತ್ತೋಡಿ ಹಿದಾಯತ್ ನಗರದ ಮೊಹಮ್ಮದ್ ಆಶ್ರಫ್

ತನ್ನ ಸಹೋದರ ಜೊತೆಗೂಡಿ ಚಿಕ್ಕಮ್ಮನ ಮನೆಗೆ ತೆರಳಿ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜೊತೆಯಲ್ಲಿದ್ದ ಸಹೋದರ ಇರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಶ್ರಫ್ ಮೃತಪಟ್ಟಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!