ಬೆಳ್ತಂಗಡಿ: ತಾಲೂಕು ಧ್ವನಿ ವರ್ಧಕ ಮತ್ತು ದೀಪಾಲಂಕಾರ ಸಂಘ ರಿ. ಬೆಳ್ತಂಗಡಿ ಇದರ ಕಾನೂನು ಮಾಹಿತಿ ಮತ್ತು ಸಾಮಾನ್ಯ ಸಭೆ
![ಬೆಳ್ತಂಗಡಿ: ತಾಲೂಕು ಧ್ವನಿ ವರ್ಧಕ ಮತ್ತು ದೀಪಾಲಂಕಾರ ಸಂಘ ರಿ. ಬೆಳ್ತಂಗಡಿ ಇದರ ಕಾನೂನು ಮಾಹಿತಿ ಮತ್ತು ಸಾಮಾನ್ಯ ಸಭೆ](https://namanachannel.in/wp-content/uploads/2022/08/IMG_20220818_202336-850x488.jpg)
![](https://namanachannel.in/wp-content/uploads/2022/08/IMG_20220818_202320-1024x463.jpg)
ಬೆಳ್ತಂಗಡಿ: ತಾಲೂಕು ಧ್ವನಿ ವರ್ಧಕ ಮತ್ತು ದೀಪಾಲಂಕಾರ ಸಂಘ ರಿ. ಬೆಳ್ತಂಗಡಿ ಇದರ ಕಾನೂನು ಮಾಹಿತಿ ಮತ್ತು ಸಾಮಾನ್ಯ ಸಭೆ ಆ.17 ರಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬೆಳ್ತಂಗಡಿ ವೃತ್ತ ನಿರೀಕ್ಷಕ ರಾದ ಶಿವ ಕುಮಾರ್ ಬಿ. ಇವರು ಕಾನೂನು ಮಾಹಿತಿಯನ್ನು ನೀಡಿದರು.
![](https://namanachannel.in/wp-content/uploads/2022/08/IMG_20220818_202255-1024x478.jpg)
ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಗೌರವ ಅಧ್ಯಕ್ಷ ಸುನಿಲ್ ಲೋಬೊ, ಕಾರ್ಯದರ್ಶಿ ವಸಂತ ನಾವೂರು, ಕೋಶಾಧಿಕಾರಿ ರೋಹಿತ್ ಕುಮಾರ ಹಾಜರಿದ್ದರು.
ಉಪ ಕಾರ್ಯದರ್ಶಿಯಾದ ಹರೀಶ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ರೋಹಿತ್ ಕುಮಾರ್ ಧನ್ಯವಾದವಿತ್ತರು. ಸಭೆಯಲ್ಲಿ ಸಂಘದ ಸದಸ್ಯರು ಹಾಜರಿದ್ದರು.