• July 27, 2024

ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿ ರಕ್ಷಿತ್ ಶಿವರಾಂ ಕೈ ಬಲ ಪಡಿಸಿದ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ

 ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿ ರಕ್ಷಿತ್ ಶಿವರಾಂ ಕೈ ಬಲ ಪಡಿಸಿದ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ

ಬೆಳ್ತಂಗಡಿಯ ಬಿಜೆಪಿ ಪಕ್ಷದಿಂದ ಬೇಸತ್ತು, ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷಕ್ಕೆ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕುಲಾಲ್ ಸಮುದಾಯದ ಮುಖಂಡರಾದ ಚಂದಪ್ಪ ಕುಲಾಲ್ ಅವರು ಮಾಜಿ ಶಾಸಕರಾದ ವಸಂತ ಬಂಗೇರರ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದಾರೆ.

ಮಡಂತ್ಯಾರನಲ್ಲಿ ನಡೆದ ಪಕ್ಷ ಸೇರ್ಪಡೆಯಲ್ಲಿ ಕಾಂಗ್ರೆಸ್ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅವರು ಮಾತ್ನಾಡಿ, ಚಂದಪ್ಪ ಕುಲಾಲ್ ಅವರಂತಹ ಪ್ರಮುಖರು ಪಕ್ಷಕ್ಕೆ ಸೇರಿದ್ದು ನಮಗೆ ಬಲ ಬಂದಂತಾಗಿದೆ. ನಮ್ಮ ಗೆಲುವು ಖಚಿತ ಎಂದು ವಿಸ್ವಾಸ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಚಿತ್ರನಟ ವಿಜಯ ರಾಘವೇಂದ್ರ ಪಕ್ಷದ ಮುಖಂಡರಾದ ಸತೀಶ್ ಕಾಶಿಪಟ್ನ ಪ್ರಮೋದ್ ಕುಮಾರ್ ಮಚ್ಚಿನ,ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪೆರ್ನಾಂಡೀಸ್,ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!