• October 25, 2024

ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಗಾಯಕ ಅಜಿತ್ ಪೂಜಾರಿಯವರ ನಿರ್ದೇಶನದ ” ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಆಲ್ಬಂ ಸಾಂಗ್ ಟೀಸರ್ ಬಿಡುಗಡೆ

 ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಗಾಯಕ ಅಜಿತ್ ಪೂಜಾರಿಯವರ ನಿರ್ದೇಶನದ ” ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಆಲ್ಬಂ ಸಾಂಗ್ ಟೀಸರ್ ಬಿಡುಗಡೆ

 

ಬೆಳ್ತಂಗಡಿ: ಪ್ರತೀ ದಿನ ಏನಾದರೊಂದು ಕ್ರಿಯೇಟಿವ್ ಆಗಿ ಯೋಚನೆ, ಯೋಜನೆ ಹಾಕುತ್ತಾ, ಸಂಗೀತದಲ್ಲೇ ಸಾಧನೆಯನ್ನು ಮಾಡಿ ಉತ್ತುಂಗಕ್ಕೆ ಏರುವ ಪ್ರಯತ್ನವನ್ನು ಮಾಡಿ, ಹಲವಾರು ಆಲ್ಬಂ ಸಾಂಗ್ ಅನ್ನು ತಾನೇ ಸ್ವತಂ ರಚಿಸಿ, ನಿರ್ದೇಶನ, ಸಂಗೀತ, ಗಾಯಕರಾಗಿ ಮಿಂಚುತ್ತಿರುವ ಬೆಳ್ತಂಗಡಿ ತಾಲೂಕಿನ , ಕನ್ಯಾಡಿಯ ಪ್ರತಿಭಾವಂತ ಯುವಕ ಅಜಿತ್ ಪೂಜಾರಿ ಕನ್ಯಾಡಿ.

ಬೆಳ್ತಂಗಡಿ ತಾಲೂಕಿನಲ್ಲಿ ಇತ್ತೀಚೆಗೆ ಹೆಚ್ಚಾಗಿ ಸಂಗೀತ , ಗಾಯನದಲ್ಲಿ ಹೆಸರುವಾಸಿಯಾಗಿರುವ ಅಜಿತ್ ಪೂಜಾರಿಯವರು ಇದೀಗ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರು , ಬೆಳ್ತಂಗಡಿ ಅಭಿವೃದ್ಧಿಯ ಹರಿಕಾರ ಹರೀಶ್ ಪೂಂಜರಿಗಾಗಿ ಸುಂದರವಾದ ಅರ್ಥಪೂರ್ಣವಾದ ಸಾಹಿತ್ಯವನ್ನು ರಚಿಸಿ ಮಧುರವಾದ ಕಂಠದಿಂದ ಹೊಗಲಿದ್ದಾರೆ. ಮಾ.18 ರಂದು ಅಜಿತ್ ಪೂಜಾರಿ ಕನ್ಯಾಡಿ ಕ್ರಿಯೇಷನ್ಸ್ ಅರ್ಪಿಸುವ “ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಎಂಬ ಆಲ್ಬಂ ಸಾಂಗ್ ಟೀಸರ್ ಬಿಡುಗಡೆಗೊಂಡಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಅಜಿತ್ ಪೂಜಾರಿ ಕನ್ಯಾಡಿಯವರ ಅದ್ಬುತ ಸಾಹಿತ್ಯ, ಗಾಯನ, ನಿರ್ದೇಶನ ರಾಗ ಸಂಯೋಜನೆಯಲ್ಲಿ ಮೂಡಿಬಂದು,ನವೀನ್ ಸುವರ್ಣ ಕನ್ಯಾಡಿ, ಪವನ್ ಪ್ರಭು ಉಜಿರೆ, ಅವಿನಾಶ್ ಶೆಟ್ಟಿ ಕನ್ಯಾಡಿ, ನಿದೀಶ್ ಶೆಟ್ಟಿ ಕನ್ಯಾಡಿ, ಅಶೋಕ್ ಬಂಗೇರ ಓಟ್ಲ, ರಾಘವೇಂದ್ರ ಗೌಡ ಊಕ್ರೊಟ್ಟು ಇವರ ನಿರ್ಮಾಣದಲ್ಲಿ, ಸಂದೀಪ್ ಆರ್ ಬಳ್ಳಾಲ್ ಇವರ ಸಂಗೀತ ಪ್ರೋಗ್ರಾಮಿಂಗ್, ಸಹನ್ ಎಮ್ ಎಸ್ ಉಜಿರೆ ಇವರ ಸಂಕಲನದಲ್ಲಿ ಸುಂದರವಾಗಿ ಮೂಡಿಬಂದಿದೆ.

ರೆಕಾರ್ಡಿಂಗ್ ಆ್ಯಂಡ್ ಮಿಕ್ಸಿಂಗ್ ಸೌಂಡ್ ಮಾಸ್ಟರ್ ಗುರುವಾಯನಕೆರೆ ಹಾಗೂ ಪ್ರಚಾರ ಕಲೆ ಪ್ರೀವಂತ ಕ್ರಿಯೇಟಿವ್ ಸೆಂಟರ್ ಇವರು ಸಹಕರಿಸಿದ್ದಾರೆ.

ಒಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ಪ್ರತಿಭೆ ಅಜಿತ್ ಪೂಜಾರಿಯವರು ಇನ್ನೂ ಎತ್ತರಕ್ಕೆ ಬೆಳೆದು ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ಗಾಯಕನಾಗಿ ಬೆಳೆಯಲಿ ಎಂಬುವುದೆ ನಮ್ಮ ಆಶಯ

Related post

Leave a Reply

Your email address will not be published. Required fields are marked *

error: Content is protected !!