• July 27, 2024

ಹೊಸ್ಮಾರು ಶ್ರೀಕ್ಷೇತ್ರ ಸಿದ್ಧರವನ ಬಸದಿಗೆ ಸಚಿವ ಸುನೀಲ್ ಕುಮಾರ್ ಭೇಟಿ

 ಹೊಸ್ಮಾರು ಶ್ರೀಕ್ಷೇತ್ರ ಸಿದ್ಧರವನ ಬಸದಿಗೆ ಸಚಿವ ಸುನೀಲ್ ಕುಮಾರ್ ಭೇಟಿ


ಕಾರ್ಕಳ: ಹೊಸ್ಮಾರು ಶ್ರೀಕ್ಷೇತ್ರ ಸಿದ್ಧರವನ ಬಸದಿ ಗೆ ಇಂಧನ ಮತ್ತು ಸಂಸ್ಕೃತಿ ಸಚಿವರು ಹಾಗೂ ಕಾರ್ಕಳ ಶಾಸಕರು ವಿ. ಸುನಿಲ್ ಕುಮಾರ್ ಅವರು ಭಗವಾನ್ 1008 ಶ್ರೀ ಮಹಾವೀರ ಸ್ವಾಮಿಯ ದರ್ಶನ ಪಡೆದು, ನೂತನ ಏಕಶಿಲ ಮಾನಸ್ತಂಭವನ್ನು ವೀಕ್ಷಿಸಿ
ಪರಮಪೂಜ್ಯ ಮುನಿಶ್ರೀ 108 ವೀರ ಸಾಗರ ಮುನಿ ಮಹಾರಾಜರ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿನ ಅಧ್ಯಕ್ಷರು ಹಾಗೂ ಸದಸ್ಯರ ವತಿಯಿಂದ ಸಚಿವರಿಗೆ ಸನ್ಮಾನಿಸಲಾಯಿತು. ಪ್ರಧಾನ ಪುರೋಹಿತರು, ಬಸದಿ ಅಧ್ಯಕ್ಷರು ಹಾಗೂ ಟ್ರಸ್ಟಿಗಳು ಹಾಗೂ ಶ್ರಾವಕ ಬಂಧುಗಳು ಸಿದ್ಧರವನ ಬಸದಿ ಹೊಸ್ಮರ್ ಹಾಗೂ ಊರಿನ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.


Related post

Leave a Reply

Your email address will not be published. Required fields are marked *

error: Content is protected !!