• October 25, 2024

ಬೆಳ್ತಂಗಡಿ: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ , ಹಿಂದೂ ರಾಷ್ಟ್ರ ಜಾಗೃತಿ ಸಭೆ

 ಬೆಳ್ತಂಗಡಿ:    ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ , ಹಿಂದೂ ರಾಷ್ಟ್ರ ಜಾಗೃತಿ ಸಭೆ

 

ಬೆಳ್ತಂಗಡಿ: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಜ.30 ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆ ನೆರವೇರಿತು.

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ರಘೋತ್ತಮ ಆಚಾರ್ಯ ಇವರು ಶಂಖನಾದ ಮಾಡುವ ಮೂಲಕ ಮತ್ತು ಗಣ್ಯರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭೆ ಪ್ರಾರಂಭವಾಯಿತು. ವೇದಮೂರ್ತಿಗಳಾದ ಕಂಠೀರವ ನವಾತೆ ಮತ್ತು ಪುರುಷೋತ್ತಮ ಮರಾಠೆ ಇವರು ವೇದ ಮಂತ್ರ ಪಠಣವನ್ನು ಮಾಡಿದರು.

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಇವರು ಮಾತನಾಡುತ್ತಾ ಭಾರತ ದೇಶ ಜಾತ್ಯತೀತ ಹೆಸರಿನಲ್ಲಿ ಸಮಾನತೆ ತರಲು ಪ್ರಯತ್ನ ಮಾಡುತ್ತಿದೆ. ಆದರೆ ಎಲ್ಲಿದೆ ಸಮಾನತೆ ? ಅಲ್ಪ ಸಂಖ್ಯಾತರಿಗಾಗಿ ವಿಶೇಷ ಆಯೋಗಗಳನ್ನು ನಿರ್ಮಿಸಲಾಗುತ್ತಿದೆ ಆದರೆ ಹಿಂದುಗಳಿಗೆ ಒಂದೇ ಒಂದು ಆಯೋಗ ಇದೆಯೇ? ಸಂವಿಧಾನದಲ್ಲಿ 28 ನೇ ಕಲಂ ನಲ್ಲಿ ಧರ್ಮ ಶಿಕ್ಷಣಕ್ಕೆ ಅವಕಾಶ ಇಲ್ಲ ಎಂದು ಹೇಳಲಾಗಿದೆ ಆದರೆ 30ನೇ ಕಲಂ ನಲ್ಲಿ ಮದರಸದಲ್ಲಿ, ಕಾನ್ವೆಂಟ್ ನಲ್ಲಿ ನೀಡಬಹುದು ಎಂದು ಹೇಳಲಾಗಿದೆ. ಅವರಿಗೆ ಅನುದಾನ ನೀಡಲು ಅಭ್ಯಂತರ ಇಲ್ಲ .ಆದರೆ ಹಿಂದುಗಳಿಗೆ ವೇದ ಪಾಠಶಾಲೆಯಲ್ಲಿ ಧರ್ಮ ಶಿಕ್ಷಣ ನೀಡಿದರೆ ಸರಕಾರದಿಂದ ಅನುದಾನ ಸಿಗುವುದಿಲ್ಲ. ಇದಕ್ಕಾಗಿ ಧರ್ಮಾಧಿಷ್ಠಿತ ಸಮಾಜ ಸ್ಥಾಪನೆ ಯಾಗಲು ಭಾರತ ಹಿಂದೂ ರಾಷ್ಟ್ರವಾಗಬೇಕು. ಹಿಂದೂ ರಾಷ್ಟ್ರದ ಚಳುವಳಿಯನ್ನು ಮುಂದೆ ಕೊಂಡೊಯ್ಯ ಬೇಕಾದರೆ ಅದಕ್ಕೆ ಭಗವಂತನ ಅಧಿಷ್ಠಾನ ಬೇಕು. ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲವು ಅತಿ ಶ್ರೇಷ್ಠವಾಗಿದೆ. ಹಿಂದೂ ರಾಷ್ಟ್ರ ಕಾರ್ಯ ಮಾಡುವಾಗ ಸಂಖ್ಯಾಬಲ ಇದು ನಮ್ಮ ಶಸ್ತ್ರವಾಗಿದೆ ಎಂಬ ಭ್ರಮೆಯಲ್ಲಿ ಇರುವ ಬದಲು ಆಧ್ಯಾತ್ಮಿಕ ಸಾಮರ್ಥ್ಯವನ್ನು ಹೆಚ್ಚಿಸಿ ಭಗವಂತನ ಆಶೀರ್ವಾದ ಪಡೆದು ಕಾರ್ಯವನ್ನು ಮಾಡೋಣ ಎಂದು ಕರೆ ನೀಡಿದರು.

ಶ್ರೀಕೃಷ್ಣ ಉಪಾಧ್ಯಾಯ ಇವರು ಮಾತನಾಡುತ್ತಾ ಇವತ್ತು ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ. ಇತ್ತೀಚೆಗೆ ನಮ್ಮ ಭಾರತ ದೇಶವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ, ಈ ಎಲ್ಲ ಸವಾಲುಗಳ ಸಾಲು ಯಾಕೆ ನಿರ್ಮಾಣ ಆಗುತ್ತಿದೆ ಎಂದರೆ ನಮ್ಮಲ್ಲಿ ಸಂಘಟಿತ ಪ್ರಯತ್ನ ಕಡಿಮೆ ಇದೆ. ಹಿಂದೂಗಳು ಸಂಘಟಿತರಾಗಿದ್ದರೆ ಯಾರಿಂದಲೂ ಎದುರಿಸಲು ಸಾಧ್ಯವಿಲ್ಲ ಎಂದು ಇತಿಹಾಸದಿಂದ ಕಲಿತಿದ್ದೇವೆ. ಬ್ರಿಟಿಷರು ನಮ್ಮನ್ನು ಸಂಘಟಿತರಾಗದಂತೆ ವಿಭಜನೆ ಮಾಡಿ ನಮ್ಮನ್ನು ದೀರ್ಘಕಾಲದ ವರೆಗೆ ಆಳ್ವಿಕೆ ಮಾಡಿದರು. ಇದಕ್ಕಾಗಿ ನಾವೆಲ್ಲರೂ ಹಿಂದೂಗಳು ಒಟ್ಟಾಗಬೇಕು ಮತ್ತು ಸಮಯ ಕೊಡಬೇಕು, ಹಾಗೂ ಎಲ್ಲರೂ ಹಿಂದೂ ಧರ್ಮದ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ವಿಜಯಕುಮಾರ್ ಇವರು ಮಾತನಾಡುತ್ತಾ ಹಿಂದೂಗಳು ಹಿಂದೂ ಧರ್ಮದ ಆಚರಣೆ ಮಾಡದೇ ಇರುವುದರಿಂದ ಇವತ್ತು ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದಿಗೆ ಗುರಿಯಾಗುತ್ತಿದ್ದಾರೆ. ಹಿಂದೂ ರಾಷ್ಟ್ರದ ಸಂಕಲ್ಪನೆ ಯಾವ ರೀತಿ ಇದೆ ನಿಜವಾದ ಹಿಂದೂ ಯಾರು? ಲವ್ ಜಿಹಾದನ ಭೀಕರತೆಯನ್ನು ಹಲವಾರು ನೈಜ ಘಟನೆಗಳ ಮುಖಾಂತರ ತಿಳಿಯಪಡಿಸಿದರು. ಹಲಾಲ್ ಜಿಹಾದ್ ನಿಂದ ಆಗುವ ಆರ್ಥಿಕತೆಯ ಹೊಡೆತ, ಲ್ಯಾಂಡ್ ಜಿಹಾದ್ ನಿಂದ ಯಾವ ರೀತಿ ಹಿಂದೂಗಳಿಗೆ ಅನ್ಯಾಯ ಆಗ್ತಾ ಇದೆ, ನಮ್ಮ ಹೆಣ್ಮಕ್ಕಳು ಲವ್ ಜಿಹಾದ್ ಗೆ ಬಲಿಯಾಗಿ ಮತಾಂತರವಾಗಿ ಮನಪರಿವರ್ತನೆಯಾಗಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಿಂದೂ ವಿರೋಧಿ ಕಾರ್ಯವನ್ನು ಮಾಡುವಂತೆ ಷಡ್ಯಂತ್ರ ಆಗುತ್ತಿದೆ. ಹಿಂದುಗಳಿಗೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಧರ್ಮ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು. ಮತ್ತು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಹಿಂದೂ ರಾಷ್ಟ್ರ ಕಡೆಗೆ ಕಟಿಬದ್ಧರಾಗೋಣ ಎಂದರು. ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಜಿಲ್ಲಾ ಸಮಿತಿ ಸಮನ್ವಯಕರಾದ ಪವಿತ್ರ ಕುಡ್ವ ಇವರು ಮಾಡಿದರು.

ಹಿಂದೂ ಜನಜಾಗೃತಿ ಸಮಿತಿಯ ಹರೀಶ್ ಮುದ್ದಿನಡ್ಕ ಮತ್ತು ಕು. ದಿವ್ಯಾ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಆಗಿರುವ ನವೀನ್ ನೆರಿಯ, ಸಮಿತಿಯ ಶಶಿಧರ ಮಾಕಳ ದಾಮೋದರ, ಸನಾತನ ಸಂಸ್ಥೆಯ ಆನಂದ ಗೌಡ, ಹಾಗೂ ಧರ್ಮ ಪ್ರೇಮಿಗಳಾದ ಶ್ರೀ. ವಸಂತ ಉಜಿರೆ, ಧರ್ಮಸ್ಥಳ ಜಮಾ ಉಗ್ರಾಣ ಮುತ್ಸದ್ಧಿ ಹಾಗೂ ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು ಭುಜಬಲಿ ಧರ್ಮಸ್ಥಳ ಇವರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!