ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು
![ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಬಡ ಕುಟುಂಬಗಳಿಗೆ ಆರ್ಥಿಕ ನೆರವು](https://namanachannel.in/wp-content/uploads/2022/07/IMG-20220731-WA0038-850x560.jpg)
ಬಂಟ್ವಾಳ: ಬಂಟ್ವಾಳ ತಾಲೂಕಿನ ಮೇಗಿನ ಕೂರಿಯಾಳ ಜಯಶೀಲ ಸದಾಶಿವ ಆಚಾರ್ಯ ದಂಪತಿಗಳ 1 ವರ್ಷ 5 ತಿಂಗಳ ಗಂಡು ಮಗು ಸಮಿತ್ ಮಲವಿಸರ್ಜನೆ ಮಾಡುವ ಅಂಗ ಮತ್ತು ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ಈ ಪುಟ್ಟ ಮಗುವಿನ ಚಿಕಿತ್ಸೆಗೆ ತುಳುನಾಡಿನ ಹೆಸರಾಂತ ಸೇವಾ ಸಂಸ್ಥೆಗಳಲ್ಲಿ ಒಂದಾದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ವತಿಯಿಂದ ರೂ. 35,000 ಚೆಕ್ ನ ಧನ ಸಹಾಯ ವನ್ನು ಹಸ್ತಾಂತರಿಸಲಾಯಿತು.
ಅಲ್ಲದೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಮಿತ್ತಲಚ್ಚಿಲ್ ವಿಮಲ ಹರಿಯಪ್ಪ ನಾಯ್ಕ್ ದಂಪತಿಗಳ ಪುತ್ರ ಅಕ್ಷಯ್ ರವರ ಕಾಲೇಜ್ ಶುಲ್ಕ ಪಾವತಿಸಲು ರೂ. 10,000 ಚೆಕ್ ನ ಧನ ಸಹಾಯವನ್ನು ಬಂಟ್ವಾಳ ತಾಲೂಕಿನ ನಾವೂರು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀ ರಾಮಚಂದ್ರ ಭಟ್ ಇವರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.