• October 25, 2024

ತಣ್ಣೀರುಪಂತ ಗ್ರಾಮದ ರವಿ ಎಂಬವರ ಭೂಮಿಯಲ್ಲಿ ಜಲದ ಸಮಸ್ಯೆ: ಹಲವು ದೇವಾಲಯಗಳಿಗೆ ಹರಕೆ: ಕೊನೆಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಮೊರೆ ಹೋದ ಭಕ್ತ: ಭೂಮಿಯಲ್ಲಿ ಧಾರಾಕಾರವಾಗಿ ಚಿಮ್ಮಿತು ನೀರು

 ತಣ್ಣೀರುಪಂತ ಗ್ರಾಮದ ರವಿ ಎಂಬವರ ಭೂಮಿಯಲ್ಲಿ ಜಲದ ಸಮಸ್ಯೆ: ಹಲವು ದೇವಾಲಯಗಳಿಗೆ ಹರಕೆ: ಕೊನೆಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಮೊರೆ ಹೋದ ಭಕ್ತ: ಭೂಮಿಯಲ್ಲಿ ಧಾರಾಕಾರವಾಗಿ ಚಿಮ್ಮಿತು ನೀರು

 

ತಣ್ಣೀರುಪಂತ: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಪೊಸಂದೋಡಿ ಮನೆಯ ರವಿ ಎಂಬುವವರು ತನ್ನ ಭೂಮಿಯಲ್ಲಿ ಜಲದ ಸಮಸ್ಯೆ ಕಂಡುಬಂದಿದ್ದ ವೇಳೆ ಹಲವು ದೇವಾಲಯಗಳಿಗೆ ಹರಕೆ ನೀಡಿದರು ಏನೂ ಪ್ರಯೋಜನ ಆಗದೇ ಇದ್ದಾಗ, ಐತಿಹಾಸಿಕ ಪ್ರಸಿದ್ದ ಪುಣ್ಯಕ್ಷೇತ್ರವಾಗಿರುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಅನುಗ್ರಹದಿಂದ ನೀರಿನ ಸಮಸ್ಯೆಯು ಬಗೆಹರಿದ ಘಟನೆ ನಡೆದಿದೆ.

ನೀರಿನ ಸಮಸ್ಯೆ ಕಂಡುಬಂದಾಗ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಅಭಯ ನುಡಿಯಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ಅಭಯ ನುಡಿಯಲ್ಲಿ ನಿಮ್ಮ ಭೂಮಿಯಲ್ಲಿದ್ದ ಸಮಸ್ಯೆಯನ್ನು ಪರಿಹಾರ ಮಾಡಿ ನೀರಿನ ಸಮಸ್ಯೆಯನ್ನು ಬಗೆಹರಿಸಿ, ಕೊಟ್ಟ ಮಾತಿನಂತೆ ನಡೆದಿದ್ದಾಳೆ ಶ್ರೀ ಚಾಮುಂಡೇಶ್ವರಿ ತಾಯಿ.

ಡಿ.30 ರಂದು ರವಿ ಅವರು ತನ್ನ ಭೂಮಿಯಲ್ಲಿ ತೆಗೆದ ಬೋರಿನಲ್ಲಿ ಧಾರಾಕಾರವಾಗಿ ನೀರು ಬಂದಿದ್ದು, ಕತ್ತಲೆಯ ಬದುಕಿಗೆ ಬೆಳಕಾದಳು ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ. ನಂಬಿ ಬಂದ ಭಕ್ತರನ್ನು ಪೊರೆಯುತ್ತಾಳೆ ಎಂಬುವುದಕ್ಕೆ ಇಂತಹ ನಿದರ್ಶನಗಳೆ ಸಾಕ್ಷಿ

Related post

Leave a Reply

Your email address will not be published. Required fields are marked *

error: Content is protected !!