ಕರಾಯ ಡಿಜಿಟಲ್ ಸೇವಾಕೇಂದ್ರ ಉದ್ಘಾಟನೆ
![ಕರಾಯ ಡಿಜಿಟಲ್ ಸೇವಾಕೇಂದ್ರ ಉದ್ಘಾಟನೆ](https://namanachannel.in/wp-content/uploads/2022/11/IMG_20221118_122144-850x560.jpg)
ಕರಾಯ: ಕಣಿಯೂರು ವಲಯದ ಕರಾಯ ಬಿ ವಿಭಾಗದಲ್ಲಿ ನ.18 ರಂದು ಡಿಜಿಟಲ್ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕರಾಯ ಒಕ್ಕೂಟದ ಮಾಜಿ ಅಧ್ಯಕ್ಷ ಗೋವಿಂದ ಗೌಡರವರು ಉದ್ಘಾಟನೆ ಮಾಡಿದರು. ಶ್ರೀ ಕ್ಷೇ. ಧ. ಗ್ರಾ. ಯೋ. ಯೋಜನಾಧಿಕಾರಿ ಯಶವಂತ್ ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷ ರಘುರಾಮ್ ಶೆಟ್ಟಿ, ಶ್ರೀ ಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಶೆಟ್ಟಿ, ತಾಜುದ್ದೀನ್, ಒಕ್ಕೂಟ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರಾದ ಪ್ರೇಮ ಸೇವಾಪ್ರತಿನಿಧಿ ಸುಜಾತಾ ಉಪಸ್ಥಿತರಿದ್ದರು.
ಒಕ್ಕೂಟ ಜೊತೆ ಕಾರ್ಯದರ್ಶಿ ಜನಾರ್ಧನ್ ರವರು ಧನ್ಯವಾದಗೈದರು.