• September 8, 2024

ಕುದ್ರಾಯದಲ್ಲಿ ಕೆಟ್ಟು ನಿಂತ ಧರ್ಮಸ್ಥಳ- ಮಿಯಾರ್ ಗೆ ಹೋಗುವ ಬಸ್: ಪ್ರಯಾಣಿಕರ ಪರದಾಟ

 ಕುದ್ರಾಯದಲ್ಲಿ ಕೆಟ್ಟು ನಿಂತ ಧರ್ಮಸ್ಥಳ- ಮಿಯಾರ್ ಗೆ ಹೋಗುವ ಬಸ್: ಪ್ರಯಾಣಿಕರ ಪರದಾಟ

ಕುದ್ರಾಯ: ಧರ್ಮಸ್ಥಳದಿಂದ ಮಿಯಾರ್ ಗೆ ತೆರಳುವ ಬಸ್ ಸಂಜೆ 5:30 ಸುಮಾರಿಗೆ ಕುದ್ರಾಯ ಎಂಬಲ್ಲಿ ಕೆಟ್ಟು ನಿಂತು ಇಂದು ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಸಮಯಕ್ಕೆ ಸರಿಯಾಗಿ ಬದಲಿ ಬಸ್ ನೀಡಿದ್ದರು ಸಹ ವಿದ್ಯಾರ್ಥಿಗಳಿಗೆ ಅಡಚಣೆಯುಂಟಾಗಿದೆ.

ಈ ಮೊದಲು ಹಲವಾರು ಭಾರೀ ಇದೇ ಸಮಸ್ಯೆಗಳಾಗಿದ್ದು ಬರೆಂಗಾಯ ಕಾರ್ಯಾತಡ್ಕ ಹಾಗೂ ಮಿಯಾರ್ ಗೆ ತೆರಳುವ ಪ್ರಯಾಣಿಕರಿಗೆ ಅಸಮಾಧಾನ ಉಂಟಾಗಿದೆ.

ಅತೀ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಬರುವ ಈ ಬಸ್ಸಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸ್ಥಳೀಯ ಡಿಪ್ಪೋಗಳು ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ.

Related post

Leave a Reply

Your email address will not be published. Required fields are marked *

error: Content is protected !!