ಕುದ್ರಾಯದಲ್ಲಿ ಕೆಟ್ಟು ನಿಂತ ಧರ್ಮಸ್ಥಳ- ಮಿಯಾರ್ ಗೆ ಹೋಗುವ ಬಸ್: ಪ್ರಯಾಣಿಕರ ಪರದಾಟ
ಕುದ್ರಾಯ: ಧರ್ಮಸ್ಥಳದಿಂದ ಮಿಯಾರ್ ಗೆ ತೆರಳುವ ಬಸ್ ಸಂಜೆ 5:30 ಸುಮಾರಿಗೆ ಕುದ್ರಾಯ ಎಂಬಲ್ಲಿ ಕೆಟ್ಟು ನಿಂತು ಇಂದು ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಸಮಯಕ್ಕೆ ಸರಿಯಾಗಿ ಬದಲಿ ಬಸ್ ನೀಡಿದ್ದರು ಸಹ ವಿದ್ಯಾರ್ಥಿಗಳಿಗೆ ಅಡಚಣೆಯುಂಟಾಗಿದೆ.
ಈ ಮೊದಲು ಹಲವಾರು ಭಾರೀ ಇದೇ ಸಮಸ್ಯೆಗಳಾಗಿದ್ದು ಬರೆಂಗಾಯ ಕಾರ್ಯಾತಡ್ಕ ಹಾಗೂ ಮಿಯಾರ್ ಗೆ ತೆರಳುವ ಪ್ರಯಾಣಿಕರಿಗೆ ಅಸಮಾಧಾನ ಉಂಟಾಗಿದೆ.
ಅತೀ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಬರುವ ಈ ಬಸ್ಸಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸ್ಥಳೀಯ ಡಿಪ್ಪೋಗಳು ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ.