• July 27, 2024

ಪುತ್ತೂರು: ” ರೈಟ್ ಪೋಯಿ” ಎಂದು ಹೇಳಿ ಎಡವಟ್ಟು ಮಾಡಿದ ವಿದ್ಯಾರ್ಥಿ: ನಿರ್ವಾಹಕನನ್ನು ಬಿಟ್ಟು ಹೋದ ಚಾಲಕ: ಬೇರೊಂದು ಬಸ್ಸಲ್ಲಿ ಬಂದು ಕರ್ತವ್ಯದ ಬಸ್ ಸೇರಿಕೊಂಡ ನಿರ್ವಾಹಕ

 ಪುತ್ತೂರು: ” ರೈಟ್ ಪೋಯಿ” ಎಂದು ಹೇಳಿ ಎಡವಟ್ಟು ಮಾಡಿದ ವಿದ್ಯಾರ್ಥಿ: ನಿರ್ವಾಹಕನನ್ನು ಬಿಟ್ಟು ಹೋದ ಚಾಲಕ: ಬೇರೊಂದು ಬಸ್ಸಲ್ಲಿ ಬಂದು ಕರ್ತವ್ಯದ ಬಸ್ ಸೇರಿಕೊಂಡ ನಿರ್ವಾಹಕ

ಪುತ್ತೂರು: ವಿದ್ಯಾರ್ಥಿಯೊಬ್ಬ ಬಸ್ಸಿನಲ್ಲಿ ರೈಟ್ ಪೋಯಿ ಎಂದು ಹೇಳಿದ ಕಾರಣ ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನ.3ರಂದು ಬೆಳಗ್ಗೆ ನಡೆದಿದೆ.

ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಕೆಎಸ್ಆರ್ ಟಿಸಿ ಬಸ್ಸಿನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ನಿಲ್ದಾಣದಿಂದ ಬಸ್ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ರೈಟ್ ಪೋಯಿ ಎಂದು ಹೇಳಿದ್ದಾನೆ. ನಿರ್ವಾಹಕಣೆ ರೈಟ್ ಪೋಯ್ ಎಂದು ಹೇಳಿದ್ದಾಗಿ ಭಾವಿಸಿದ ಚಾಲಕ ಬಸ್ ಚಲಾಯಿಸಿದ್ದಾರೆ ಪುತ್ತೂರು ನಿಲ್ದಾಣದಿಂದ ಹೊರಟ ಬಸ್ ಎಂಟಿ ರಸ್ತೆಯಾಗಿ ತಾಲೂಕು ಕಚೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ಚಾಲಕನಿಗೆ ಬಸ್ಸಿನಲ್ಲಿ ನಿರ್ವಾಹಕ ಇಲ್ಲದಿರುವುದು ಗೊತ್ತಾಗಿದೆ ಇದೇ ವೇಳೆ ಬೇರೊಂದು ಕೆ ಎಸ್ ಆರ್ ಟಿಸಿ ಬಸ್ ಮೂಲಕ ನಿರ್ವಾಹಕ ಆಗಮಿಸಿ ತನ್ನ ಕರ್ತವ್ಯದ ಬಸ್ ಸೇರಿಕೊಂಡಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!