• October 18, 2024

ಶ್ರೀ ಆರಿಕೋಡಿ ಕ್ಷೇತ್ರದಿಂದ ಕೊಲ್ಪಾಡಿ ಶಾಲೆಗೆ ಪ್ರಿಂಟರ್ ಕೊಡುಗೆ

 ಶ್ರೀ  ಆರಿಕೋಡಿ ಕ್ಷೇತ್ರದಿಂದ ಕೊಲ್ಪಾಡಿ ಶಾಲೆಗೆ ಪ್ರಿಂಟರ್ ಕೊಡುಗೆ

 


ಬೆಳಾಲು: ಇಲ್ಲಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿ ಇಲ್ಲಿಗೆ,ಶಾಲಾ ಕಚೇರಿಯ ಕೆಲಸಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲವಾಗುವಂತೆ ಪ್ರಿಂಟರ್ ಖರೀದಿಸಲು ಧನಸಹಾಯವನ್ನು ನೀಡಲಾಯಿತು.

ಶುಕ್ರವಾರದ ಪೂಜಾ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮೋಕ್ತೆಸರರಾದ ಶ್ರೀ ಡೊಂಬಯ್ಯಗೌಡರು ಚೆಕ್ ಮೂಲಕ ಶಾಲೆಗೆ ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಗೌಡ ಆರಿಕೋಡಿ,ಅಧ್ಯಕ್ಷರಾದ ಶ್ರೀ ವಸಂತಗೌಡ ಉಪಸ್ಥಿತರಿದ್ದರು.ಶಾಲಾ ಪರವಾಗಿ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್,ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಾಧವ ಗೌಡ ಓಣಾಜೆ,ಉಪಾಧ್ಯಕ್ಷರಾದ ಶ್ರೀಮತಿ ಲೇಖಾವತಿ,ಸದಸ್ಯರಾದ ಶ್ರೀಮತಿ ಹೇಮಲತಾ ಹಾಗೂ ಗೌರವ ಶಿಕ್ಷಕರಾದ ಕರಿಯಣ್ಣ ಗೌಡ ಬೇರಿಕೆ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!