• September 8, 2024

ಲಾಯಿಲ:ಸಂಗಮ ಸಭಾಭವನ ಉದ್ಘಾಟನೆ

 ಲಾಯಿಲ:ಸಂಗಮ ಸಭಾಭವನ ಉದ್ಘಾಟನೆ

ಲಾಯಿಲ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ  ಜ್ಯೋತಿ ಆಸ್ಪತ್ರೆ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಸಂಗಮ ಸಭಾಭವನ ಉದ್ಘಾಟನಾ  ಕಾರ್ಯಕ್ರಮವು ಆ.7 ರಂದು ನೆರವೇರಿತು.

ಕಾರ್ಯಕ್ರಮದ   ಉದ್ಘಾಟನೆಯನ್ನು  ಶ್ರೀ ಆದಿಚುಂಚನಗಿರಿ ಮಹಾಸಂಸ್ದಾಪನ ಶಾಖಾ ಮಠ  ಕಾವೂರಿನ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ನೆರವೇರಿಸಿದರು.

ಕರ್ನಾಟಕ ಸರಕಾರ ಮಾಜಿ ಸಚಿವರು  ಕೆ. ಗಂಗಾಧರ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ  ಶಾಸಕ ಹರೀಶ್ ಪೂಂಜ,  ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ .ಪಿ ಕುಶಾಲಪ್ಪ ಗೌಡ, ಸುಧಾ ಬರಗೂರು ಬೆಂಗಳೂರು ಉಪಸ್ಥಿತರಿದ್ದರು. 

ಸಂಗಮ ಕಲಾಭವನದ ಪಾಲುದಾರರಾದ  ಉಜಿರೆ ಕಾರ್ತಿಕ್ ಎಂಟರ್ ಪ್ರ್ಯೆಸಸ್ ನ ಮಾಲಿಕರಾದ  ಶ್ರೀಮತಿ ಮತ್ತು ಕೆ ಧರ್ಮಣ್ಣ  ಗೌಡ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!