• July 27, 2024

ಜೆಸಿಐ ಬೆಳ್ತಂಗಡಿ ಮಂಜು ಶ್ರೀ ವತಿಯಿಂದ ಬೇಸಿಗೆ ಶಿಬಿರ ಪ್ರಾರಂಭ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ 4ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಎ. 28 ರಿಂದ ಪ್ರಾರಂಭಗೊಂಡು ಮೇ 02ರ ವರೆಗೆ ಜೆಸಿ ಭವನ ಬೆಳ್ತಂಗಡಿಯಲ್ಲಿ ಬೇಸಿಗೆ ಶಿಬಿರ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಹಿಂದುಳಿದ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕರು ಚಂದ್ರಪ್ಪ ನೆರವೇರಿಸಿದರು

ಮುಖ್ಯ ಅತಿಥಿಯಾಗಿ ಕನ್ನಡ ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ, ಜೆ.ಜೆ.ಸಿ ಅಧ್ಯಕ್ಷರು ಜೆ.ಜೆ.ಸಿ ರಾಮಕೃಷ್ಣ ಶರ್ಮಾ, ಅಧ್ಯಕ್ಷರು ಜೆಸಿಹೆಚ್ ಜಿ ಎಫ್ ಶಂಕರ್ ರಾವ್, ನಿಕಟ ಪೂರ್ವ ಅಧ್ಯಕ್ಷರು ಜೆ.ಎಫ್.ಎಮ್ ಪ್ರಸಾದ್ ಬಿ. ಎಸ್, ಕಾರ್ಯದರ್ಶಿ ಜೆಸಿ ಸುಧೀರ್ ಕೆ. ಎನ್., ಬೇಸಿಗೆ ಶಿಬಿರದ ಸಂಯೋಜಕರು ಜೆ.ಎಫ್.ಎಮ್ ಹೇಮಾವತಿ ಕೆ., ಮಹಿಳಾ ಸಂಯೋಜಕಿ ಜೆಸಿ ಮಮಿತಾ ಸುಧೀರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಕ್ರಾಫ್ಟ್, ಚಿತ್ರಕಲೆ, ಕೊಲಾಜ್ ಗ್ರೀಟಿಂಗ್ ಕಾರ್ಡ್‌ ತಯಾರಿಕೆ, ಕೇ ಮಾದರಿ ತಯಾರಿ, ಕ್ರಿಯಾನ್ ವರ್ಕ್ಸ್, ಹಾಡು, ಮನೋರಂಜನಾ ಆಟಗಳು, ಜೀವನ ಕೌಶಲ್ಯ ತರಬೇತಿಗಳು, ಹೊರಾಂಗಣ ಪರಿಸರ ಚಟುವಟಿಕೆಗಳು ನಡೆಯಲಿದೆ.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕ್ಷರಾದ Jc ತುಕಾರಾಮ್ ಸ್ವಾಗತಿಸಿ ಕಾರ್ಯದರ್ಶಿ ಸುಧೀರ್ ಕೆ ಎನ್ ಧನ್ಯವಾದವಿತ್ತರು

Related post

Leave a Reply

Your email address will not be published. Required fields are marked *

error: Content is protected !!