• July 27, 2024

ಕುಟ್ರುಪ್ಪಾಡಿ: ವನಮಹೋತ್ಸವ ಕಾರ್ಯಕ್ರಮ

 ಕುಟ್ರುಪ್ಪಾಡಿ: ವನಮಹೋತ್ಸವ ಕಾರ್ಯಕ್ರಮ

ಕುಟ್ರುಪ್ಪಾಡಿ: ವನಮಹೋತ್ಸವ ಕಾರ್ಯಕ್ರಮ ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ, ಜೀವಜ್ಯೋತಿ ಮಹಾಸಂಘ ಕುಟ್ರುಪ್ಪಾಡಿ ಹಾಗೂ ಕಿರಣ್ ಮಹಿಳಾ ತಾಲೂಕು ಒಕ್ಕೂಟ (ರಿ) ಕಡಬ ನೇತೃತ್ವದಲ್ಲಿ ಲಕ್ಷ್ಮಣ ಫಲ ಗಿಡ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಕುಟ್ರುಪ್ಪಾಡಿ ಚರ್ಚ್ ಆವರಣದಲ್ಲಿ ದಿನಾಂಕ 12 ಜುಲೈ 2022 ರಂದು ನಡೆಸಲಾಯಿತು. ಕುಟ್ರುಪ್ಪಾಡಿ ಚರ್ಚಿನ ಧರ್ಮಗುರುಗಳು ವಂದನೀಯ ಫಾದರ್ ಜೋಸ್ ಆಯಾಂಕುಡಿ ಇವರು ವನಮಹೋತ್ಸವದ ಮಹತ್ವವನ್ನು ತಿಳಿಸಿದರು ಹಾಗೂ ಮಹಾಸಂಘದ ಮಹಿಳೆಯರ ಸಹಕಾರದಿಂದ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ಇವರು ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಲಕ್ಷ್ಮಣ ಫಲ ಗಿಡಗಳನ್ನು ವಿತರಿಸಿದರು. ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಉಷಾ ಜೋಯಿ, ಕೋಶಾಧಿಕಾರಿ ಶ್ರೀಮತಿ ಶೈಲ, ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೋ, ಕಾರ್ಯಕರ್ತರಾದ ಶ್ರೀಮತಿ ಸುಶೀಲಾ. ಶ್ರೀಮತಿ ತೇಜಾವತಿ ಮತ್ತು ಒಕ್ಕೂಟದ ಪದಾಧಿಕಾರಿಗಳು,ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ವಿಲಿಯಂ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!