• July 27, 2024

ಹಿಂದೂ ರಾಷ್ಟ್ರವೆಂದರೆ ರಾಜಕೀಯವಲ್ಲ, ಕೋಮುವಾದವಲ್ಲ, ಬದಲಾಗಿ ಅದು ಆಧ್ಯಾತ್ಮಿಕ, ಸುಸಂಸ್ಕೃತ ಹಿಂದೂ ರಾಷ್ಟ್ರವಾಗಿದೆ ! ಹಿಂ. ಜ. ಸ ರಾಜ್ಯ ಸಮನ್ವಯಕರು ಗುರುಪ್ರಸಾದ್ ಗೌಡ

 ಹಿಂದೂ ರಾಷ್ಟ್ರವೆಂದರೆ ರಾಜಕೀಯವಲ್ಲ, ಕೋಮುವಾದವಲ್ಲ, ಬದಲಾಗಿ ಅದು ಆಧ್ಯಾತ್ಮಿಕ, ಸುಸಂಸ್ಕೃತ ಹಿಂದೂ ರಾಷ್ಟ್ರವಾಗಿದೆ ! ಹಿಂ. ಜ. ಸ ರಾಜ್ಯ ಸಮನ್ವಯಕರು ಗುರುಪ್ರಸಾದ್ ಗೌಡ

ಮಂಗಳೂರು – ಭಾರತದ ಸಂವಿಧಾನದ ಪೀಠಿಕೆಯಲ್ಲಿ, ಪ್ರತಿಯೊಬ್ಬ ನಾಗರಿಕನು ಸಮಾನತೆ, ಬಂಧುತ್ವ ಮತ್ತು ನ್ಯಾಯವನ್ನು ಅನುಭವಿಸಬೇಕು ಎಂದು ಹೇಳಲಾಗಿದೆ. ಆದರೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಆಯೋಗ, ಸಚ್ಚರ್ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವಾಲಯವಿದೆ; ಆದರೆ ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ರಕ್ಷಣೆ ನೀಡಲು ಯಾವುದೇ ಸಚಿವಾಲಯ-ಆಯೋಗ ಇಲ್ಲ. ಹಿಂದೂ ರಾಷ್ಟ್ರವೆಂದರೆ ರಾಜಕೀಯವಲ್ಲ, ಕೋಮುವಾದವಲ್ಲ, ಬದಲಾಗಿ ಅದು ಆಧ್ಯಾತ್ಮಿಕ, ಸುಸಂಸ್ಕೃತ ಹಿಂದೂ ರಾಷ್ಟ್ರವಾಗಿದೆ ! ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕರು ಗುರುಪ್ರಸಾದ ಗೌಡ ಹೇಳಿದರು.

ಅವರು ಮಾ.9 ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.

ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಅನುದಾನವಿದೆ, ಹಾಗಾದರೆ ಬಹುಸಂಖ್ಯಾತ ಹಿಂದೂಗಳು ಮಾಡಿದ ಅಪರಾಧವೇನು ?
ಇದನ್ನೆಲ್ಲ ನೋಡಿದರೆ ಭಾರತದಲ್ಲಿ ನಿಜವಾಗಿಯೂ ‘ಸೆಕ್ಯುಲರ್’ ವ್ಯವಸ್ಥೆ ಇದೆಯೇ ? ಸಾವಿರಾರು ಹಿಂದೂ ಹೆಣ್ಣುಮಕ್ಕಳ ಜೀವನವನ್ನು ನಾಶ ಮಾಡುವ ಲವ್ ಜಿಹಾದ್’, ಹಿಂದೂ ಕಾರ್ಯಕರ್ತರ ಹತ್ಯೆ, ಭಾರತದ ಆರ್ಥಿಕತೆಗೆ ಅಪಾಯಕಾರಿಯಾದ ಹಲಾಲ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಹಿಂದೂಗಳ ಮೇಲಿನ ಅನ್ಯಾಯಗಳಿಗೆ, ನ್ಯಾಯ ನೀಡಲು, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ 12 ಮಾರ್ಚ್ 2023 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಕದ್ರಿ ಮೈದಾನದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಆಯೋಜಕರಿಗೆ ಜೀವ ಬೆದರಿಕೆ ಹಾಕಿದ್ದ ಎಸ್.ಡಿ.ಪಿ.ಐ ಯನ್ನು ನಿಷೇಧಿಸಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿತು.

ಪತ್ರಿಕಾ ಗೋಷ್ಠಿ ಯಲ್ಲಿ ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ.ಕ. ಜಿಲ್ಲಾ ಸಹ ಸಂಚಾಲಕರಾದ ದಿನೇಶ್ ಜೈನ್, ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಶೆಟ್ಟಿ ಅಡ್ಯಾರ್, ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಕೊಟ್ಟಾರಿ ಮತ್ತು ಹಿಂದುಸ್ಥಾನ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಲೋಕೇಶ್ ಉಳ್ಳಾಲ್ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!