ನೂತನವಾಗಿ ರಚನೆಗೊಂಡ ಮೆಸ್ಕಾಂ ಹೊಸ್ಮಾರ್ ಶಾಖಾ ಕಛೇರಿ ಉದ್ಘಾಟನೆ


ಹೊಸ್ಮರ್ :ನೂತನವಾಗಿ ರಚನೆಗೊಂಡ ಮೆಸ್ಕಾಂ ಹೊಸ್ಮಾರ್ ಶಾಖಾ ಕಛೇರಿ ಉದ್ಘಾಟನಾ ಸಮಾರಂಭ ಮಾ.8 ರಂದು ಶಿವಗಿರಿ ಕಾಂಪ್ಲೆಕ್ಸ್, ಈದು ಕ್ರಾಸ್,ಹೊಸ್ಮಾರ್ ವಿನಲ್ಲಿ ಉದ್ಘಾಟನಾ ನಡೆಯಿತು.
ಸಮಾರಂಭದಲಿ ಉದ್ಘಾಟಕರಾಗಿ ಕಾರ್ಕಳ ಶಾಸಕರು ಮತ್ತು ಮಾನ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ ಸುನೀಲ್ ಕುಮಾರ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ನರಸಿಂಹ , ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ದಿಲೀಪ್ ಕುಮಾರ್ ಕಾರ್ಕಳ ಮತ್ತು ವಿನಾಯಕ ಕಾಮತ್ ನಿಟ್ಟೆ, ಲೆಕ್ಕಾಧಿಕಾರಿ ದೀಪಕ್ ಹಾಗೂ ಮೆಸ್ಕಾಂ ಕಾರ್ಕಳ ವಿಭಾಗದ ಅಧಿಕಾರಿಗಳು ಮತ್ತು ನೌಕರರು ಈದು ಗ್ರಾಮ ಪಂಚಾಯಿತಿ ಅಧ್ಯಕ್ಷರು,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯರು ಹಾಜರಿದರು.