• October 18, 2024

ಅಳದಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮುಗುಳಿ ಸಮರ್ಪಣೆ

 ಅಳದಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮುಗುಳಿ ಸಮರ್ಪಣೆ

 

ಅಳದಂಗಡಿ: ಪುನರ್ನಿರ್ಮಾಣಗೊಳ್ಳುತ್ತಿರುವ ಅಳದಂಗಡಿ ಫಲ್ಗುಣಿ ತೀರದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗರ್ಭಗುಡಿಯ ಮೇಲೆ ಪ್ರತಿಷ್ಠಾಪಿಸಲು ಮುಗುಳಿಯನ್ನು ಶ್ರೀಕ್ಷೇತ್ರದ ವತಿಯಿಂದ ಹಸ್ತಾಂತರಿಸಿದರು.

ಈಗಾಗಲೇ ಅವರು ರೂ.10 ಲಕ್ಷದ ಧನಸಹಾಯವನ್ನು ನೀಡಿದ್ದಾರಲ್ಲದೆ, ಗಣಪತಿಯ ನೂತನ ವಿಗ್ರಹವನ್ನೂ ಮಾಡಿಸಿಕೊಟ್ಟಿರುತ್ತಾರೆ. ವಿಗ್ರಹವನ್ನು ಜನವರಿ 29 ರಂದು ಕಾರ್ಕಳದಿಂದ ಮೆರವಣಿಗೆಯ ಮೂಲಕ ತರುವುದೆಂದು ತೀರ್ಮಾನಿಸಲಾಗಿದೆ.

ಹೆಗ್ಗಡೆಯವರು ಫೆಬ್ರುವರಿ 4 ರಂದು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಆಶೀರ್ವದಿಸಲಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯರಾದ ವಸಂತ ಸಾಲಿಯಾನ್ ಕಾಪಿನಡ್ಕ, ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಡಾ. ಶಶಿಧರ್ ಡೋಂಗ್ರೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಪ್ರ.ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ,ಕೋಶಾಧಿಕಾರಿ ಅನಿಲ್ ಕುಮಾರ್ ಮಾಳಿಗೆ ಮನೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು,ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ,ಪ್ರಮುಖರಾದ ಜಗನ್ನಾಥ ಶೆಟ್ಟಿ, ಸುರೇಶ್ ಶೆಟ್ಟಿ ಕುರೆಲ್ಯ, ನವೀನ್ ಕೆ ಸಾಮಾನಿ,ಯೋಜನೆಯ ಮೇಲ್ವಿಚಾರಕಿ ಸುಮಂಗಳಾ, ಸೇವಾ ಪ್ರತಿನಿಧಿ ಹರಿಣಾಕ್ಷಿ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!