• September 8, 2024

ಕೊಟ್ಟ ಮಾತಿಗೆ ತಪ್ಪದೆ ಭಕ್ತರನ್ನು ಪೊರೆಯುವ ಮಹಾಶಕ್ತಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ಮಕ್ಕಳ‌ ಭಾಗ್ಯವಿಲ್ಲ ಎಂದು ನೊಂದು ಬಂದ ದಂಪತಿಗಳ ಬಾಳಿಗೆ ಕರುಣಿಸಿದ ಮಗುವಿನ ಭಾಗ್ಯ

 ಕೊಟ್ಟ ಮಾತಿಗೆ ತಪ್ಪದೆ ಭಕ್ತರನ್ನು ಪೊರೆಯುವ ಮಹಾಶಕ್ತಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ಮಕ್ಕಳ‌ ಭಾಗ್ಯವಿಲ್ಲ ಎಂದು ನೊಂದು ಬಂದ ದಂಪತಿಗಳ ಬಾಳಿಗೆ ಕರುಣಿಸಿದ ಮಗುವಿನ ಭಾಗ್ಯ

ಆರಿಕೋಡಿ: ಕೊಟ್ಟ ಮಾತಿಗೆ ತಪ್ಪದೆ ಭಕ್ತರನ್ನು ಪೊರೆಯುವ ಮಹಾಶಕ್ತಿಯಾಗಿ ಆರಿಕೋಡಿ ಸನ್ನಿಧಾನದಲ್ಲಿ ನೆಲೆಯಾಗಿ ಶಕ್ತಿ ಪೀಠದಲ್ಲಿ ಕುಳಿತಿರುವ ಶ್ರೀ ಚಾಮುಂಡೇಶ್ವರಿ ತಾಯಿಯ ಕಾರ್ಣಿಕ ಪವಾಡವೇ ಅಂತಹುದು.

ಏನೇ ಕಷ್ಟವಾಗಲಿ ಆ ಕಷ್ಟದಲ್ಲಿ ಇಷ್ಟಾರ್ಥ ವನ್ನು ಸಿದ್ದಿಸುತ್ತಾಳೆ ಚಾಮುಂಡೇಶ್ವರಿ ತಾಯಿ. ತಮಗೆ ಮದುವೆಯಾಗಿ 7 ವರ್ಷಗಳಾದರೂ ಮಕ್ಕಳ ಭಾಗ್ಯವಿಲ್ಲ ಎಂದು ನೊಂದ ಬಂದ
ದಂಪತಿಗಳಿಗೆ ನೆರಳಾಗಿದ್ದು ಚಾಮುಂಡೇಶ್ವರಿ ತಾಯಿಯ ಅಭಯದ ನುಡಿ.

ಅದೆಷ್ಟೋ ಜನರ ಬಾಳಿಗೆ ಬೆಳಕಾದ ಅಭಯದ ನುಡಿ ಇಲ್ಲಿರುವ ದಂಪತಿಗಳ ಮೊಗದಲ್ಲೂ ಮಂದಹಾಸ ಬೀರಿದೆ. ಮಕ್ಕಳ ಭಾಗ್ಯವನ್ನೇ ಕಳೆದುಕೊಂಡಿದ್ದ ಇವರಿಗೆ ತಾಯಿಯ ಆಶೀರ್ವಾದದಿಂದ ಮಗುವು ಜನನವಾಗುತ್ತದೆ. ಒಂದು ವರ್ಷದೊಳಗಾಗಿ ಮಗುವಿನ ಭಾಗ್ಯ ನಿಮಗಾಗುತ್ತದೆ ಎಂದು ಅಭಯದ ನುಡಿಯ ಮೂಲಕ ಸೂಚನೆ ನೀಡಿದ ತಾಯಿಯ ಮಾತು ನಿಜವಾಗಿದೆ. ಇದರಿಂದ ತೃಪ್ತಿಗೊಂಡ ದಂಪತಿಗಳು ಕ್ಷೇತ್ರಕ್ಕೆ ಆಗಮಿಸಿ ಹರಕೆಯನ್ನು ತೀರಿಸಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಬರೆಂಗಾಯ ಪರಿಸರದ ದಿನೇಶ್ ಮತ್ತು ಪುಷ್ಪಾವತಿ.

Related post

Leave a Reply

Your email address will not be published. Required fields are marked *

error: Content is protected !!