• September 8, 2024

ಆಸ್ಪತ್ರೆ ಡಿಸ್ಚಾರ್ಜ್ ಆದ ದಿನವೇ ಸಂತ್ರಸ್ತ ಸುರತ್ಕಲ್ ಕಾಟಿಪಳ್ಳದ ಕಾರು ಡಿಕ್ಕಿಯಿಂದ ಮಗಳನ್ನು ಕಳಕೊಂಡ ಕುಟುಂಬ ಭೇಟಿ ಮಾಡಿ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಪದ್ಮರಾಜ್

 ಆಸ್ಪತ್ರೆ ಡಿಸ್ಚಾರ್ಜ್ ಆದ ದಿನವೇ ಸಂತ್ರಸ್ತ ಸುರತ್ಕಲ್ ಕಾಟಿಪಳ್ಳದ ಕಾರು ಡಿಕ್ಕಿಯಿಂದ ಮಗಳನ್ನು ಕಳಕೊಂಡ ಕುಟುಂಬ ಭೇಟಿ ಮಾಡಿ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಪದ್ಮರಾಜ್

ಅಕ್ಟೋಬರ್ 18ರಂದು ಕುದ್ರೋಳಿ ದೇವಳದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಭೇಟಿ ನೀಡಿ ಮನೆಗೆ ಹೋಗಲು ಬಸ್ ಹತ್ತಲು ಲೇಡಿಹಿಲ್ ನಾರಾಯಣಗುರು ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿ ಮೃತಪಟ್ಟ ಸುರತ್ಕಲ್ ಕಾನ, ಬಾಳ ನಿವಾಸಿ ರೂಪಶ್ರೀ ಕುಲಾಲ್ ಮನೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿ, ಕುದ್ರೋಳಿ ಗುರುಬೆಳದಿಂಗಳು ಫೌಂಡೇಶನ್‌ನಿಂದ ಸಹಾಯಹಸ್ತ ನೀಡಲಾಯಿತು.


ಅಕ್ಟೋಬರ್ 18ರಂದು ಕುದ್ರೋಳಿ ದೇವಳದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಭೇಟಿ ನೀಡಿ ಮನೆಗೆ ಹೋಗಲು ಬಸ್ ಹತ್ತಲು ಲೇಡಿಹಿಲ್ ನಾರಾಯಣಗುರು ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಸುರತ್ಕಲ್ ಕಾನ, ಬಾಳ ನಿವಾಸಿ ರೂಪಶೀ ಕುಲಾಲ್ (23) ಮೃತಪಟ್ಟಿದ್ದರು. ಆದರೆ ಪದ್ಮರಾಜ್ ಅಂದು ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಮೃತರ ಕುಟುಂಬಸ್ಥರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾಜ್ ಆದ ತಕ್ಷಣ ರೂಪಶ್ರೀ ಕುಲಾಲ್ ತಂದೆ ತಾಯಿ ಅಣ್ಣ ತಂಗಿಯನ್ನು ಸಂತೈಸಿ ತಮ್ಮ ನೇತೃತ್ವದ ಗುರುಬೆಳದಿಂಗಳು ಸಂಸ್ಥೆಯಿಂದ ರೂಪಶ್ರೀ ತಾಯಿ ಮತ್ತು ಗಾಯಗೊಂಡವರಿಗೆ ಸಹಾಯಧನದ ಚೆಕ್ ವಿತರಿಸಿದರು. ಗಾಯಗೊಂಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದ ಪದ್ಮರಾಜ್, ನಿಮ್ಮೊಂದಿಗೆ ಸದಾ ನಾವಿದ್ದೇವೆ ಎನ್ನುವ ಭರವಸೆಯ ಮಾತು ಹೇಳುವ ಮೂಲಕ ನೊಂದ ಕುಟುಂಬದ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಮುಂಬೈ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಚೇರ್ಮನ್ ಸೂರ್ಯಕಾಂತ್ ಜೆ. ಸುವರ್ಣ, ರಾಜೇಂದ್ರ ಚಿಲಿಂಬಿ, ಪ್ರವೀಣ್ ಕುಮಾರ್ ಅರ್ಕುಳ,ಪದ್ಮನಾಭ ಕೋಟ್ಯಾನ್ ಕಾಟಿಪಳ್ಳ ಮೊದಲಾದವರಿದ್ದರು.

Related post

Leave a Reply

Your email address will not be published. Required fields are marked *

error: Content is protected !!