ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ 11 ಕೆವಿ ಬಳ್ಳಮಂಜ ಫೀಡರಿನ ಹೊರೆಯನ್ನು ವಿಂಗಡಿಸಿ ಹೊಸ ಕಾರಂದೂರು ಫೀಡರು ನಿರ್ಮಾಣ ರಚನೆಯ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕರಾಯ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಕುದ್ರಡ್ಕ ಫೀಡರಿನ ಮಚ್ಚಿನ, ತಣ್ಣೀರುಪಂತ ಪರಿಸರದಲ್ಲಿ ನಾಳೆ(14)ರಂದು ಶನಿವಾರ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.Read More
Tags :Macchina
ಬೆಳ್ತಂಗಡಿ.ತಾಲೂಕಿನ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಮತ್ತು ಸಿಬ್ಬಂದಿ ವಸತಿಗೃಹ ರಚನಾ ಕಾಮಗಾರಿಗೆ ನಾಲ್ಕು ಕೋಟಿ ಅರವತ್ತೊಂಬತ್ತು ಲಕ್ಷ ಅನುದಾನ ಮಂಜೂರಾತಿ ಆಗಿದ್ದು. ಇಂದು ವಿಕಾಸ ಸೌಧ ದಲ್ಲಿ ಅರೋಗ್ಯ ಮತ್ತುಕುಟುಂಬ ಕಲ್ಯಾಣ , ಹಾಗೂದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪ್ರಮೋದ್ ಕುಮಾರ್ ಮಚ್ಚಿನ […]Read More
ಮಚ್ಚಿನ: 6 ವರ್ಷದ ಮಗುವಿನ ಜೀವ ಉಳಿಸಲು ಆ್ಯಂಬುಲೆನ್ಸ್ ಚಾಲಕನೊಬ್ಬ ನಿರಂತರ 14 ಗಂಟೆ ಆ್ಯಂಬುಲೆನ್ಸ್ ಚಲಾಯಿಸಿ ಮಗುವಿನ ಜೀವ ಉಳಿಸಿದ ಘಟನೆ ಮಚ್ಚಿನ ಗ್ರಾಮದಲ್ಲಿ ನಡೆದಿದೆ. 6 ವರ್ಷ ಪ್ರಾಯದ ಆಯುಷ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಈತನಿಗೆ ತುರ್ತು ಚಿಕಿತ್ಸೆ ನೀಡಲು ಮಂಗಳೂರಿನ ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಿಂದ ಬೆಂಗಳೂರು ಆಸ್ಪತ್ರೆಗೆ ವೀರಕೇಸರಿ ಆ್ಯಂಬುಲೆನ್ಸ್ ಮೂಲಕ ಹೊರಟ ಚಾಲಕ ದೀಕ್ಷಿತ್ 5 ಗಂಟೆಯಲ್ಲಿ ಬೆಮಗಳೂರು ತಲುಪಿದ್ದಾರೆ. ತಾಂತ್ರಿಕ ದೋಷದಿಂದ ಚಿಕಿತ್ಸೆ ನೀಡಲಾಗದ ಕಾರಣ ಅಲ್ಲಿಂದ ಚೆನ್ನೈ […]Read More
ಮಚ್ಚಿನ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುತ್ತಿನ,ದಲ್ಲಿ ಶಾಲಾಭಿವೃದ್ಧಿ ಸಮಿತಿ,ಪೋಷಕರು,ಹಳೇ ವಿದ್ಯಾರ್ಥಿ ಸಂಘ, ಸ್ಥಳೀಯ ಸ್ವಸಹಾಯ ಸಂಘಗಳ ಸದಸ್ಯರು, ಸಿದ್ಧಿ ವಿನಾಯಕ ಭಜನಾ ಮಂಡಳಿ ಮತ್ತು ಊರಿನ ಮಹನೀಯರ ಪಾಲ್ಗೊಳ್ವಿಕೆಯಿಂದ ಸ್ವಾತಂತ್ರ್ಯ ದಿನಾಚರಣೆಯ ನ್ನು ಆಚರಿಸಲಾಯಿತು. ಹಳೇ ವಿದ್ಯಾರ್ಥಿ ಸಂಘದವರಿಂದ ಮೆರವಣಿಗೆ ಆಯೋಜಿಸಲಾಗಿತ್ತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಂಗಾಧರ ಸಾಲಿಯಾನ್ ವಹಿಸಿದ್ದರು. ವೇದಿಕೆಯಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಬಿ. ಎಸ್.ಹಾಗೂ ಸ್ಥಳೀಯ ದುರ್ಗಾ ಕ್ಲಿನಿಕ್ ವೈದ್ಯಾಧಿಕಾರಿಗಳಾದ […]Read More
ಮಚ್ಚಿನ: ಹಟ್ಟಿಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಸುಟ್ಟು ಕರಕಲಾದ ಮಳೆಗಾಲಕ್ಕೆ ಶೇಖರಿಸಿಟ್ಟ ವಸ್ತುಗಳು
ಮಚ್ಚಿನ: ಮಚ್ಚಿನ ಗ್ರಾಮದ ಕಿನ್ನಿಪಲ್ಕೆ ಜಯ ಪೂಜಾರಿಯವರ ಹಟ್ಟಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹಾನಿಯಾದ ಘಟನೆ ಜು.6 ರಂದು ರಾತ್ರಿ ನಡೆದಿದೆ. ಮಳೆಗಾಲಕ್ಕೆ ಶೇಖರಿಸಿಟ್ಟ ಕಟ್ಟಿಗೆ, ತೆಂಗಿನಕಾಯಿ, ಹಾಗೂ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಪಾರ ನಷ್ಟವುಂಟಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷರು, ಗ್ರಾಮಕರಣೀಕ ಭೇಟಿ ನೀಡಿದರು.Read More
ಮಚ್ಚಿನ : ಸರಕಾರಿ ಉನ್ನತೀಕರಿಸಿದ ಪ್ರಾ. ಶಾಲೆ ಮಚ್ಚಿನ ಇಲ್ಲಿಯ 16.5 ಲಕ್ಷ ವೆಚ್ಚದ ನೂತನ ಕಟ್ಟಡ ಕಾಮಗಾರಿ ಶಿಲಾನ್ಯಾಸವನ್ನು ಸೆ.7 ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ, ಉಪಾಧ್ಯಕ್ಷರಾದ ಡೀಕಮ್ಮ, ಗ್ರಾ.ಪಂ ಸದಸ್ಯರಾದ ಚೇತನ್ , ಪ್ರಮೋದ್ ಕುಮಾರ್ , ಚಂದ್ರಶೇಖರ ಬಿ.ಎಸ್, ಜಯಶ್ರೀ , ರುಕ್ಮಣಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪರಮೇಶ್ವರ್, ಪದ್ಮನಾಭ ಸಾಲ್ಯಾನ್, ಚೆನ್ನಪ್ಪ ಪ್ರಭಾಕರ ಪ್ರಭು, ಸುಮ ಹಾಗೂ […]Read More