ಆರಿಕೋಡಿ: ನಾಲ್ಕು ವರ್ಷಗಳ ಬಳಿಕ ದಂಪತಿಗಳ ಮಡಿಲಿಗೆ ಮಗುವಿನ ಭಾಗ್ಯ : ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ

ಬಂಟ್ವಾಳ ತಾಲೂಕು ಪೆರ್ನೆ ಪರಿಸರದ ಚಂದ್ರಶೇಖರ ಮತ್ತು ಮೋಹಿನಿ ಎಂಬುವವರು ನಾಲ್ಕು ವರ್ಷಗಳ ಹಿಂದೆ ಮದುವೆ ಯಾಗಿದ್ದು, ಅವರ ದಾಪಂತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಆ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರ ಆಭಯ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಮಯದಲ್ಲಿ ಸಮಸ್ಯೆಯನ್ನು ಪರಿಯಾರ ಮಾಡಿ, ನಿಮ್ಮ ದಾಪಂತ್ಯ ಜೀವನದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಆಭಯ ಕೊಟ್ಟರು. ಕೊಟ್ಟ ಮಾತಿನ ಪ್ರಕಾರ ದಾಪಂತ್ಯ ಜೀವನ ದಲ್ಲಿ ಮಕ್ಕಳ ಭಾಗ್ಯ ಒದಗಿ ಬಂತು.ಅವರ ಜೀವನದಲ್ಲಿ ಕತ್ತಲೆಯನ್ನು ಬೆಳಕು ಮಾಡಿದ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಅನುಗ್ರಹ ಪಡೆದರು.