ಯುವ ಸಾಹಿತಿ ಸತೀಶ್ ಬಿಳಿಯೂರು ಇವರಿಗೆ”ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿ.
ಮಂಗಳೂರು:ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕ ೭೭ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕೊಡಮಾಡುವ “ಕರ್ನಾಟಕ ಮುಕುಟಮಣಿ”ರಾಜ್ಯಪ್ರಶಸ್ತಿಯನ್ನು ಸಾಹಿತ್ಯಕೇತ್ರದ ಸಾಧನೆಯನ್ನು ಪರಿಗಣಿಸಿ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಆಯ್ಕೆ ಮಾಡಲಾಗಿದೆ.ಇವರು ಹಲವಾರೂ ಪ್ರಶಸ್ತಿಗಳ ಜೊತೆ “ಕರ್ನಾಟಕ ಕನ್ನಡ ಬುಕ್ ಆಫ್ ರೆಕಾರ್ಡ್ “ಹಾಗೂ” ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್” ನ ಪುಟದಲ್ಲಿ ಹೆಸರನ್ನು ದಾಖಲಿಸಿರುತ್ತಾರೆ.