• September 8, 2024

ಸನಾತನ ಪಂಚಾಂಗ – 2023′ ರ (ಕ್ಯಾಲೆಂಡರ್) ಲೋಕಾರ್ಪಣೆಗೊಳಿಸಿದ ಡಾ||ಡಿ ವೀರೇಂದ್ರ ಹೆಗ್ಗಡೆ

 ಸನಾತನ ಪಂಚಾಂಗ – 2023′ ರ (ಕ್ಯಾಲೆಂಡರ್) ಲೋಕಾರ್ಪಣೆಗೊಳಿಸಿದ ಡಾ||ಡಿ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಆ .30 ರಂದು ‘ಸನಾತನ ಪಂಚಾಂಗ – 2023 ರ ಲೋಕಾರ್ಪಣೆಯನ್ನು ಮಾಡಿ ಪಂಚಾಂಗದ ರಚನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರುು.

ಈ ಸಂದರ್ಭದಲ್ಲಿ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ಉದ್ಯಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ಪದ್ಮನಾಭ ಶೆಟ್ಟಿಗಾರ್, ವಕೀಲರಾದ ಉದಯಕುಮಾರ್ ಬಂದಾರು, ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು ಹಾಗೂ ‘ಒಕ್ಕಲಿಗ ಯಾನೆ ಗೌಡರ ಯುವ ವೇದಿಕೆ ನಿಡ್ಲೆ ಗ್ರಾಮದ ಅಧ್ಯಕ್ಷರಾದ ಗಿರೀಶ್ ಗೌಡ ನಿಡ್ಲೆ, ಸನಾತನ ಸಂಸ್ಥೆಯ ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್ ಎಂ. ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸನಾತನ ಪಂಚಾಂಗವು ಕಳೆದ 17 ವರ್ಷಗಳಿಂದ 7 ಭಾಷೆಗಳಲ್ಲಿ ಲಕ್ಷಾಂತರ ಪ್ರತಿಗಳಲ್ಲಿ ಮುದ್ರಣವಾಗುತ್ತಿದೆ. ಈ ಪಂಚಾಂಗದಲ್ಲಿ ಪ್ರತಿ ತಿಂಗಳುಗಳಲ್ಲಿ ಬರುವ ಹಬ್ಬ-ಹರಿದಿನಗಳನ್ನು ಧರ್ಮಶಾಸ್ತ್ರದಂತೆ ಹೇಗೆ ಆಚರಿಸಬೇಕು ಎಂಬುದರ ಮಾಹಿತಿ, ದೇವತೆಗಳ ಸಾತ್ತ್ವಿಕ ಚಿತ್ರಗಳು, ಧಾರ್ಮಿಕ ವಿಧಿಗಳ ಆಚರಣೆಯ ಪದ್ದತಿ, ಮುಂಬರುವ ಆಪತ್ಕಾಲದಲ್ಲಿ ನಮ್ಮ ಜೀವದ ರಕ್ಷಣೆ ಮಾಡಿಕೊಳ್ಳುವ ಉಪಾಯಗಳು ಇದರೊಂದಿಗೆ ಧರ್ಮರಕ್ಷಣೆ, ರಾಷ್ಟ್ರಜಾಗೃತಿ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಹೇಗೆ ಮಾಡಬೇಕೆಂಬ ಕುರಿತ ಹಲವಾರು ಲೇಖನಗಳು ಇವೆ.

Related post

Leave a Reply

Your email address will not be published. Required fields are marked *

error: Content is protected !!