• October 18, 2024

ಪ್ರಧಾನ ಹಿರಿಯ ನ್ಯಾಯಾಧಿಶ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ

 

ವಕೀಲರ ಸಂಘ ರಿ ಬೆಳ್ತಂಗಡಿ ಇದರ ವತಿಯಿಂದ ವಕೀಲರ ಭವನದಲ್ಲಿ ಮಾನ್ಯ ಪ್ರಧಾನ ಹಿರಿಯ ನ್ಯಾಯಾಧಿಶರಾದ ಶ್ರೀ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಅಧ್ಯಕ್ಷತೆ : ವಸಂತ ಮರಕಡ ಇವರು ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಸಂದೇಶ್ ಕೆ ಜೆ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಬೆಳ್ತಂಗಡಿ, ಅಲೋಶಿಯಸ್ ಎಸ್ ಲೋಬೊ ಅಧ್ಯಕ್ಷರು ಹಿರಿಯ ವಕೀಲರ ಸಮಿತಿ, ನವೀನ್ ಬಿ ಕೆ ಪ್ರಧಾನ ಕಾರ್ಯದರ್ಶಿ ವಕೀಲರ ಸಂಘದ ರಿ ಬೆಳ್ತಂಗಡಿ ಉಪಸ್ಥಿತರಿದ್ದರು.

ಸನ್ಮಾನಿತರ ಬಗ್ಗೆ ಬಿ ಕೆ ಧನಂಜಯ ರಾವ್ ಹಿರಿಯ ನ್ಯಾಯವಾದಿ ಬೆಳ್ತಂಗಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘ ರಿ ಬೆಳ್ತಂಗಡಿ ಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕರಿಯನೆಲ, ಖಜಾಂಚಿಯಾದ ಶ್ರೀ ಪ್ರಶಾಂತ್ ಎಂ, ಶ್ರೀಮತಿ ಅಸ್ಮಾ, ಮತ್ತಿತರರು ಸ್ವಾಗತಿಸಿದರು

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಇತರ ಪದಾಧಿಕಾರಿಗಳು, ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಜರಿದ್ದರು.

Related post

Leave a Reply

Your email address will not be published. Required fields are marked *

error: Content is protected !!