• September 8, 2024

ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇಲ್ಲಿನ ದೇವರ ಆಲ್ಬಮ್ ಸಾಂಗ್ ಧ್ವನಿಸುರುಳಿ ಬಿಡುಗಡೆ

 ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇಲ್ಲಿನ ದೇವರ ಆಲ್ಬಮ್ ಸಾಂಗ್  ಧ್ವನಿಸುರುಳಿ ಬಿಡುಗಡೆ

ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇಲ್ಲಿನ ದೇವರ ಆಲ್ಬಮ್ ಸಾಂಗ್ ನ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಆ.5 ರಂದು ಬಿಡುಗಡೆಗೊಳಿಸಲಾಯಿತು.

ಬಿಡುಗಡೆ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜೀವಂಧರ್ ಕುಮಾರ್ ಜೈನ್, ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಗೌಡ ನೋಟರಿ ವಕೀಲರು,ಉಪಾಧ್ಯಕ್ಷರಾದ ದಿನೇಶ್ ಪೂಜಾರಿ ಉಪ್ಪಾರು, ಪ್ರಧಾನ ಕಾರ್ಯದರ್ಶಿ ಗಳಾದ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ಕಾರ್ಯದರ್ಶಿಯಾದ ಸತೀಶ್ ಗೌಡ ಎಳ್ಳುಗದ್ದೆ,ಮಹಿಳಾ ಸಮಿತಿಯ ಅಧ್ಯಕ್ಷರಾದ ಹೇಮಲತಾ ಶ್ರೀನಿವಾಸ್ ಗೌಡ,ಆಲ್ಬಮ್ ಸಾಂಗ್ ನ ನಿರ್ವಹಣೆ ಮಾಡಿದ ಕಿರಣ್ ಸುವರ್ಣ ಈರ0ತ್ಯಾರು,ಸಾಹಿತ್ಯ ರಚನೆಕಾರರಾದ ಉಮನಾಥ್ ಕೋಟ್ಯಾನ್ ತೆಂಕಕಾರ0ದೂರು,ಗಾಯಕರಾದ ರತನ್ ಕೋಟ್ಯಾನ್ ಕರಾಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದೇವಸ್ಥಾನದ ಮ್ಯಾನೇಜರ್ ಕೆ.ಶಿವಪ್ರಸಾದ್ ಗೊಲ್ಲ ನಿರೂಪಿಸಿ, ಲತಾಕೇಶವ್ ವಂದಿಸಿದರು.ಈ ಸಂಧರ್ಭದಲ್ಲಿ ಸಾಹಿತ್ಯ ರಚನೆಕಾರರು ಹಾಗೂ ಗಾಯಕರನ್ನು ಕ್ಷೇತ್ರದ ವತಿಯಿಂದ ಅಭಿನಂದಿಸಲಾಯಿತು.

Related post

Leave a Reply

Your email address will not be published. Required fields are marked *

error: Content is protected !!