ಪ್ರಸಿದ್ಧ ನಾಟಿ ವೈದ್ಯ ಉಮೇಶ್ ಪಂಡಿತ್ ದೇನೋಡಿ ಶಿಶಿಲ ನಿಧನ

ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ದೇನೋಡಿಯ ಪ್ರಸಿದ್ದ ನಾಟಿ ವೈದ್ಯರಾದ ಉಮೇಶ್ ಪಂಡಿತ್ ರವರು ನಿಧನರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿ, ಪುತ್ತೂರು, ಕಡಬ ತಾಲ್ಲೂಕಿನ ಪಟ್ಟಣಗಳಲ್ಲಿ ವಾರವಾರ ಶಿಬಿರ ನಡೆಸಿ ಹಳ್ಳಿ ಮದ್ದಿನ ಮುಖಾಂತರ ಅನೇಕ ಜನರ ಖಾಯಿಲೆಗಳನ್ನು ಗುಣಪಡಿಸಿ, ಅನೇಕ ಅಭಿಮಾನಿಗಳನ್ನು ಹೊಂದಿರುತ್ತಾರೆ.
ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪತ್ತಿರುತ್ತಾರೆ. ಇವರು ಹೆಂಡತಿ, ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.