ಬಂದಾರು: ಇತ್ತೀಚೆಗೆ ಮೃತಪಟ್ಟ ನೇರೋಳ್ದಪಲಿಕೆ ನಿವಾಸಿ ಚಂರ್ಬೆ ಅವರ ಕುಟುಂಬಕ್ಕೆ ಸಹಾಯಹಸ್ತ

ಬಂದಾರು: ಬಂದಾರು ಗ್ರಾಮದ ಬೈಪಾಡಿ ನೇರೋಳ್ದಪಲಿಕೆ (ಪೆರ್ಲ) ಕಾಲೋನಿಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತರಾದ ಬಾಬು ಅವರ ತಾಯಿ ಚಂರ್ಬೆ ಅವರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜರವರು ನೀಡಿದ ಧನ ಸಹಾಯ ಹಾಗೂ ಗ್ರಾಮಪಂಚಾಯತ್ ವತಿಯಿಂದ ತುರ್ತು ಸಹಾಯದ ನಿಧಿಯ ರೂ 3,000/- ದ ಚೆಕ್ ಬಂದಾರು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಹಾಗೂ ಬೂತ್ ಪ್ರಮುಖರಾದ ಹೊನ್ನಪ್ಪ ಗೌಡ ಅವರು ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಿ, ಸಾಂತ್ವನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ , ಗ್ರಾ.ಪಂ. ಸದಸ್ಯರಾದ ಭಾರತಿ, ಅನಿತಾ ಹಾಗೂ ಬೂತ್ ಮಟ್ಟದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.