ಕಾರ್ಕಳ: ಕೊರೋನ ಲಸಿಕೆ ಪಡೆದ ಬಳಿಕ ಕೈ ನೋವು ಕಾಣಿಸಿಕೊಂಡಿದ್ದರಿಂದ ಯುವಕ ಮನನೊಂದು ಆತ್ಮಹತ್ಯೆ
ಕಾರ್ಕಳ: ಕೊರೋನ ಲಸಿಕೆ ಪಡೆದ ಬಳಿಕ ಕೈ ನೋವು ಕಾಣಿಸಿಕೊಂಡಿದ್ದರಿಂದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ಕೌಡೂರು ಗ್ರಾಮದ ತಡ್ಪೆ ದೋಟ ಎಂಬಲ್ಲಿ ನಡೆದಿದೆ .
ಮೃತರನ್ನು ಕಾರ್ಕಳದ ಕೌಡೂರು ಗ್ರಾಮದ ತಡ್ಪೆ ದೋಟ ನಿವಾಸಿ ಪ್ರದೀಪ್ ಪೂಜಾರಿ (37) ಮೃತ ದುರ್ದೈವಿ.
ಕಳೆದ ವರ್ಷ ಕರೋನ ಸಂದರ್ಭ ಇವರ ಕೈಗೆ ಲಸಿಕೆ ನೀಡಿದ್ದು ಇದರಿಂದ ಕೈ ನೋವು ಉಂಟಾಗಿ ಸರಿಯಾಗಿ ಕೆಲಸ ಮಾಡಲಾಗುತ್ತಿರಲಿಲ್ಲ ಎನ್ನಲಾಗಿದೆ . ಇದರಿಂದ ಮಾನಸಿಕ ನೊಂದ ಅವರು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.