ರಸ್ತೆಯಲ್ಲಿ ” ಚಡ್ಡಿಗಳೇ ಎಚ್ಚರ…ನಾವು ಮರಳಿ ಬರುತ್ತೇವೆ” ಎಂದು ಬರೆದ ಕಿಡಿಗೇಡಿಗಳು: ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು
ಬಂಟ್ವಾಳ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಯಾರೋ ಕಿಡಿಗೇಡಿಗಳು ಚಡ್ಡಿಗಳೇ ಎಚ್ಚರ ಪಿಎಫ್ ಐ ನಾವು ಮರಳಿ ಬರುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ರಸ್ತೆಯಲ್ಲಿ ಬರೆಯಲಾಗಿದ್ದನ್ನು ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಮಂಡಳಿ, ದುರ್ಗಾವಾಹಿನಿ, ಬೆಳ್ತಂಗಡಿ ಪ್ರಖಂಡ ತೀವ್ರವಾಗಿ ಖಂಡಿಸಿದೆ.
ಈ ಹಿಂದೆಯೂ ಹಲವಾರು ಬಾರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಿಂದೂಗಳ ಮೇಲೆ ಮತ್ತು ಹಿಂದೂ ಶ್ರದ್ಧಾ ಕೇಂದ್ರಗಳ ಮೇಲೆ ವ್ಯವಸ್ಥಿತ ರೀತಿಯಲ್ಲಿ ಅವಹೇಳನ/ ದಾಳಿ ಮಾಡಿದ್ದು, ಬಹುಸಂಖ್ಯಾತ ಹಿಂದುಗಳ ದಾರ್ಮಿಕ ಸ್ವಾತಂತ್ರ್ಯವನ್ನು ಬೆದರಿಕೆಯ ಮೂಲಕ ಹತ್ತಿಕ್ಕುವ ಕೋಮುವಾದಿ ಅಲ್ಪಸಂಖ್ಯಾತರ ಕೃತ್ಯವನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಾ, ಘಟನೆಯ ಹಿಂದಿರುವ ಸಂಚನ್ನು ಬಯಲಿಗೆಳೆದು ತಪ್ಪಿತಸ್ಥರೆ ವಿರುದ್ಧ ತೀವ್ರ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.