• January 16, 2025

ಮಕ್ಕಳ ಭಾಗ್ಯವಿಲ್ಲದೆ ನೊಂದ ದಂಪತಿಗಳ ಬಾಳಲ್ಲಿ 7 ವರ್ಷಗಳ ಬಳಿಕ ಮಗುವಿನ ಜನನ:ಕಾರ್ಣಿಕ ಮೆರೆದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ

 ಮಕ್ಕಳ ಭಾಗ್ಯವಿಲ್ಲದೆ ನೊಂದ ದಂಪತಿಗಳ ಬಾಳಲ್ಲಿ 7 ವರ್ಷಗಳ ಬಳಿಕ ಮಗುವಿನ ಜನನ:ಕಾರ್ಣಿಕ ಮೆರೆದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ

 

ಕಡಬ ತಾಲೂಕು ಹಳೆ ನೆರೆಂಕಿ ಇಲ್ಲಿಯ ಹರಿಪ್ರಸಾದ್ ಮತ್ತು ಭವ್ಯ ಎಂಬುವವರು 07 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬಂದಿರಲಿಲ್ಲ.

ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು, ದೇವಿ ಚಾಮುಂಡೇಶ್ವರಿ ಅಮ್ಮನವರ ಅಭಯ ನುಡಿಯಲ್ಲಿ ವಿಚಾರಣೆ ಮಾಡಿದ್ದಾರೆ.

ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ, ನಿಮ್ಮ ದಾಂಪತ್ಯ ಜೀವನದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಶ್ರೀದೇವಿ ಅಭಯ ಕೊಟ್ಟಳು.

ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬಂತು. ಅವರ ಜೀವನದ ಕತ್ತಲೆಯನ್ನು ದೂರ ಮಾಡಿದ ಶ್ರೀದೇವಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು.

Related post

Leave a Reply

Your email address will not be published. Required fields are marked *

error: Content is protected !!